ADVERTISEMENT

ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ 14ರಂದು

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 16:48 IST
Last Updated 13 ಜನವರಿ 2021, 16:48 IST
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಜ.14ರಂದು ಮಕರ ಸಂಕ್ರಮಣ ದಿನ ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ ನಡೆಯಲಿದೆ.
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಜ.14ರಂದು ಮಕರ ಸಂಕ್ರಮಣ ದಿನ ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ ನಡೆಯಲಿದೆ.   

ಉಡುಪಿ: ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಜ.14ರಂದು ಮಕರ ಸಂಕ್ರಮಣ ದಿನ ಕೃಷ್ಣಮಠದಲ್ಲಿ ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ ನಡೆಯಲಿದೆ.

ಸ್ವರ್ಣ ಛತ್ರ ತಯಾರಿಗೆ 2 ಕೆಜಿ 500 ಗ್ರಾಂ ಚಿನ್ನವನ್ನು ಬಳಕೆ ಮಾಡಲಾಗಿದ್ದು, ₹ 50 ಲಕ್ಷ ವೆಚ್ಚವಾಗಿದೆ. ಉಡುಪಿಯ ಸಂತೋಷ್‌ ಶೇಟ್ ಅವರ ಉಸ್ತುವಾರಿಯಲ್ಲಿ ಪಾಜಕದ ಶಿಲ್ಪಿ ರಾಘವೇಂದ್ರಾಚಾರ್ಯ ಕುಂಜಾರುಗಿರಿ ಸ್ವರ್ಣ ಛತ್ರ ತಯಾರಿಸಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT