ADVERTISEMENT

ಕಾರ್ಕಳ: ಜೈನ ಮುನಿಗಳ ಪುರಪ್ರವೇಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 14:28 IST
Last Updated 8 ಜನವರಿ 2024, 14:28 IST
ಕಾರ್ಕಳ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವ ಹಾಗೂ ಶಿರ್ಲಾಲು ಸೂಡಿ ಬಸದಿಯ ಕಲ್ಯಾಣ ಮಹೋತ್ಸವದಲ್ಲಿ ಮಾರ್ಗದರ್ಶನ ನೀಡುವ ಮುನಿಗಳ ಪುರ ಪ್ರವೇಶ ಭಾನುವಾರ ನಡೆಯಿತು.
ಕಾರ್ಕಳ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವ ಹಾಗೂ ಶಿರ್ಲಾಲು ಸೂಡಿ ಬಸದಿಯ ಕಲ್ಯಾಣ ಮಹೋತ್ಸವದಲ್ಲಿ ಮಾರ್ಗದರ್ಶನ ನೀಡುವ ಮುನಿಗಳ ಪುರ ಪ್ರವೇಶ ಭಾನುವಾರ ನಡೆಯಿತು.   

ಕಾರ್ಕಳ: ಇಲ್ಲಿನ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವ ಹಾಗೂ ಶಿರ್ಲಾಲು ಸೂಡಿ ಬಸದಿಯ ಕಲ್ಯಾಣ ಮಹೋತ್ಸವದಲ್ಲಿ ಮಾರ್ಗದರ್ಶನ ನೀಡುವ ಮುನಿಗಳ ಪುರಪ್ರವೇಶ ಭಾನುವಾರ ನಡೆಯಿತು.

ಮುನಿಗಳಾದ ಅಮೋಘಕೀರ್ತಿ ಮಹಾರಾಜ್, ಅಮರಕೀರ್ತಿ ಮಹಾರಾಜ್ ಅವರನ್ನು ಜೈನ ಸಮುದಾಯದ ಪ್ರಮುಖರು, ಶ್ರಾವಿಕ, ಶ್ರಾವಿಕೆಯರು ಜೋಡುಕಟ್ಟೆ ಸಮೀಪ ಸಕಲ ಮಂಗಳ ವಾದ್ಯ ಪುರಸ್ಸರವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.

ದಾನಶಾಲೆ ಜೈನಮಠದ ಯತಿ ಲಲಿತಕೀರ್ತಿ ಭಟ್ಟಾರಕ ಸ್ವಾಮಿಗಳ ಉಪಸ್ಥಿತಿಯಲ್ಲಿ ಮುನಿವರ್ಯರು ಮಂಗಲ ಪ್ರವಚನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.