ADVERTISEMENT

ಪರೀಕ್ಷೆಗೆ ಹಾಜರಾಗದಂತೆ ಶಾಸಕ ರಘುಪತಿ ಭಟ್ ಬೆದರಿಕೆ: ಆಲಿಯಾ ಅಸಾದಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 7:00 IST
Last Updated 23 ಏಪ್ರಿಲ್ 2022, 7:00 IST
ಶಾಸಕ ರಘುಪತಿ ಭಟ್
ಶಾಸಕ ರಘುಪತಿ ಭಟ್   

ಉಡುಪಿ: ಶನಿವಾರ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ನಾವು ಮಾಡಿರುವ ಅಪರಾಧವಾದರೂ ಏನು? ದೇಶ ಎತ್ತ ಸಾಗುತ್ತಿದೆ ಎಂದು ಹಿಜಾಬ್ ಪರ ಕಾನೂನು ಹೋರಾಟ ನಡೆಸುತ್ತಿರುವ ಆಲಿಯಾ ಅಸಾದಿ ಟ್ವೀಟ್ ಮಾಡಿದ್ದಾರೆ.

'ಶುಕ್ರವಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನನಗೆ ಹಾಗೂ ರೇಶಮ್‌ಗೆ ಅನುಮತಿ ನಿರಾಕರಿಸಲಾಗಿದೆ. ಪದೇ ಪದೆ ನಮ್ಮನ್ನು ನಿರಾಶೆಗೊಳಿಸಲಾಗುತ್ತಿದೆ' ಎಂದು ಆಲಿಯಾ ಅಸಮಾಧಾನ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.