ADVERTISEMENT

ಶ್ರೀಕೃಷ್ಣಮಠಕ್ಕೆ ಮರಳಿದ ಸುಭದ್ರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:35 IST
Last Updated 12 ಆಗಸ್ಟ್ 2019, 8:35 IST
ಅನಾರೋಗ್ಯದಿಂದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶ್ರೀಕೃಷ್ಣಮಠದ ಆನೆ ಸುಭದ್ರೆಯನ್ನು ಮರಳಿ ಕರೆತರಲಾಗಿದೆ.
ಅನಾರೋಗ್ಯದಿಂದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶ್ರೀಕೃಷ್ಣಮಠದ ಆನೆ ಸುಭದ್ರೆಯನ್ನು ಮರಳಿ ಕರೆತರಲಾಗಿದೆ.   

ಉಡುಪಿ: ‌ಅನಾರೋಗ್ಯದಿಂದಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶ್ರೀಕೃಷ್ಣಮಠದ ಆನೆ ಸುಭದ್ರೆಯನ್ನು ಮತ್ತೆ ಶ್ರೀಕೃಷ್ಣಮಠಕ್ಕೆ ಕರೆತರಲಾಗಿದೆ.

ಪಲಿಮಾರು ಶ್ರೀಗಳ ಪರ್ಯಾಯದ ಸಂದರ್ಭ ಆನೆಗೆ ಅನಾರೋಗ್ಯ ಕಾಡಿದ್ದರಿದಂ ಸಕ್ರೆಬೈಲು ಆನೆಬಿಡಾರಕ್ಕೆ ಚಿಕಿತ್ಸೆಗೆ ಕಳುಹಿಸಲಾಗಿತ್ತು.ಐದು ದಿನಗಳ ಹಿಂದೆ ಮಠಕ್ಕೆ ಸುಭದ್ರೆ ಮಠಕ್ಕೆ ಬಂದಿದ್ದು, ಮುಖ್ಯದ್ವಾರ ಬಳಿಯ ಹಳೆಯ ಆನೆಲಾಯದಲ್ಲಿ ವಾಸ್ತವ್ಯ ಹೂಡಿದೆ. ಸುಭದ್ರೆ ಗುಣಮುಖ ಹೊಂದಿದೆ ಮಠ ತಿಳಿಸಿದೆ.

ಶ್ರೀಕೃಷ್ಣಮಠದಲ್ಲಿ ರಥೋತ್ಸವ ನಡೆಯುತಿದ್ದು, ಮೇ 29 ರಿಂದ ಸುವರ್ಣಗೋಪುರ ಸಮರ್ಪಣೆ ಕಾರ್ಯಕ್ರಮ ಇರುವ ಕಾರಣದಿಂದ ಸುಭದ್ರೆಯನ್ನು ಕರೆತರಲಾಗಿದೆ. ಮಠದ ಪರಿಸರಕ್ಕೆ ಹೊಂದಿಕೊಂಡರೆ ಆನೆ ಇಲ್ಲಿಯೇ ಇರಲಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.