ADVERTISEMENT

ಸುಕೃತೀಂದ್ರ ಸ್ವಾಮಿಜಿ ಪುಣ್ಯತಿಥಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:29 IST
Last Updated 3 ಆಗಸ್ಟ್ 2021, 4:29 IST
ಕಾರ್ಕಳ ಶ್ರೀನಿವಾಸಾಶ್ರಮದ ಸುಕೃತೀಂದ್ರ ಬಲಾಕಾಶ್ರಮದಲ್ಲಿ ಕಾಶೀಮಠಾಧೀಶ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆಚರಿಸಲಾಯಿತು.
ಕಾರ್ಕಳ ಶ್ರೀನಿವಾಸಾಶ್ರಮದ ಸುಕೃತೀಂದ್ರ ಬಲಾಕಾಶ್ರಮದಲ್ಲಿ ಕಾಶೀಮಠಾಧೀಶ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆಚರಿಸಲಾಯಿತು.   

ಕಾರ್ಕಳ: ಇಲ್ಲಿನ ಶ್ರೀನಿವಾಸಾಶ್ರಮದ ಸುಕೃತೀಂದ್ರ ಬಲಾಕಾಶ್ರಮದಲ್ಲಿ ಭಕ್ತರ ಉಪಸ್ಥಿತಿಯಲ್ಲಿ ಕಾಶೀಮಠಾಧೀಶ ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆಚರಿಸಲಾಯಿತು.

ಬೆಳಿಗ್ಗೆ ಸ್ತೋತ್ರ ಪಠಣ, ಭಜನಾ ಕಾರ್ಯಕ್ರಮ ನಡೆದವು. ಮಧ್ಯಾಹ್ನ ಮುರಳೀಧರ ಗೋಪಾಲಕೃಷ್ಣ ದೇವರ ಪೂಜೆ, ಗುರುಪೂಜೆ ನಡೆಯಿತು.

ವೆಂಕಟರಮಣ ಮಹಿಳಾ ಭಜನಾ ಮಂಡಳಿ ಹಾಗೂ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಸಂಕೀರ್ತನಾ ಕಾರ್ಯಕ್ರಮಗಳು ನಡೆದವು.

ADVERTISEMENT

ವೇದಮೂರ್ತಿ ಗೋಪಿನಾಥ ಪುರಾಣಿಕ ಧಾರ್ಮಿಕ ವಿಧಿ ನಡೆಸಿದರು. ಸೇವಾದಾರರಾದ ಟಿ.ಸುರೇಂದ್ರ ಕಾಮತ್, ಟಿ.ಶ್ರೀನಿವಾಸ ಕಾಮತ್, ಸುಕೃತೀಂದ್ರ ಬಲಾಕಾಶ್ರಮದ ಸಂಚಾಲಕ ಎಂ.ಶ್ರೀನಿವಾಸ ಪೈ ಇದ್ದರು.

ಕಾಶೀಮಠ ವ್ಯವಸ್ಥಾಪನಾ ಸಮಿತಿಯ ಕೋಶಾಧಿಕಾರಿ ಐ. ರವೀಂದ್ರನಾಥ ಪೈ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.