ADVERTISEMENT

ಇಂದು ವಟುವಿಗೆ ಪ್ರಣವೋಪದೇಶ

ಸನ್ಯಾಸ ಧೀಕ್ಷೆಯ ಪೂರ್ವಭಾವಿಯಾಗಿ ಆತ್ಮಶ್ರಾದ್ಧ, ಗೋದಾನ, ದಶದಾನ

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:45 IST
Last Updated 9 ಮೇ 2019, 19:45 IST
ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಶೈಲೇಶ ಉಪಾಧ್ಯಾಯ ಎಂಬ ವಟುವಿಗೆ ಸನ್ಯಾಸ ಧೀಕ್ಷೆಯ ಪೂರ್ವಭಾವಿ ವಿಧಿವಿಧಾನಗಳು ಗುರುವಾರ ನಡೆದವು.
ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಶೈಲೇಶ ಉಪಾಧ್ಯಾಯ ಎಂಬ ವಟುವಿಗೆ ಸನ್ಯಾಸ ಧೀಕ್ಷೆಯ ಪೂರ್ವಭಾವಿ ವಿಧಿವಿಧಾನಗಳು ಗುರುವಾರ ನಡೆದವು.   

ಉಡುಪಿ: ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಶೈಲೇಶ ಉಪಾಧ್ಯಾಯ ಎಂಬ ವಟುವಿಗೆ ಸನ್ಯಾಸ ಧೀಕ್ಷೆಯ ಪೂರ್ವಭಾವಿ ವಿಧಿವಿಧಾನಗಳು ಗುರುವಾರ ನೆರವೇರಿದವು.

ಮೊದಲಿಗೆ ಆತ್ಮಶ್ರಾದ್ಧ ನೆರವೇರಿತು. ಬಳಿಕತುರಿಯಾಶ್ರಮವಾದ ಸನ್ಯಾಸ ಅಧಿಕಾರ ಯೋಗ್ಯತಾ ಸಿದ್ಧಿಗೋಸ್ಕರ ಪ್ರಾಯಶ್ಚಿತ್ತ ಪೂರ್ವಕವಾಗಿ ಗೋದಾನ ಹಾಗೂ ದಶದಾನಗಳನ್ನು ನೀಡಲಾಯಿತು. ಬಳಿಕ ವಟು ಶೈಲೇಶ ಉಪಾಧ್ಯಾಯ ಅವರ ಕೇಶಮುಂಡನ ನಡೆಯಿತು. ನಂತರ ಮಧ್ವಸರೋವರದಲ್ಲಿ ಪವಿತ್ರಸ್ನಾನ ನೆರವೇರಿತು.

ಶುಕ್ರವಾರ ಬೆಳಗಿನ ಜಾವ ಬ್ರಾಹ್ಮೀ ಮಹೂರ್ತವಾದ 3.57ಕ್ಕೆ ಪ್ರಣವೋಪದೇಶ ಪುರಸ್ಸರ ಸನ್ಯಾಸಧೀಕ್ಷೆ ನೆರವೇರಲಿದೆ. ಪಲಿಮಾರು ಶ್ರೀಗಳು ವಟುವಿಗೆ ಪ್ರಣವೋಪದೇಶ ನೀಡಲಿದ್ದಾರೆ. ಶನಿವಾರ ಅಷ್ಟ ಮಹಾಮಂತ್ರೋಪದೇಶ ಸರ್ವಮೂಲ ಶಾಂತಿಪಾಠ, ತತ್ವ ಚಿಂತನೆಗಳ ವಿಧಿವಿಧಾನಗಳು ನಡೆಯಲಿವೆ.

ADVERTISEMENT

ಮೇ 12ರಂದು ಪಲಿಮಾರು ಪೀಠದ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಲಿದ್ದು, ಸಾವಿರಾರು ಭಕ್ತರು ಉಪಸ್ಥಿತರಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.