ADVERTISEMENT

ಪರಶುರಾಮ ಮೂರ್ತಿ ಪ್ರಕರಣ; ಕಾಂಗ್ರೆಸ್‌ನವರಿಗೆ ಸೋಲು: ಶಾಸಕ ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 23:58 IST
Last Updated 15 ಜುಲೈ 2025, 23:58 IST
ವಿ. ಸುನಿಲ್‌ ಕುಮಾರ್‌
ವಿ. ಸುನಿಲ್‌ ಕುಮಾರ್‌   

ಉಡುಪಿ: ‘ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ಬಗ್ಗೆ ಕಾಂಗ್ರೆಸ್‌ನವರ ಆರೋಪಗಳು ಸುಳ್ಳು ಎಂಬುದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಿಂದ ಸಾಬೀತಾಗಿದೆ’ ಎಂದು ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಮಂಗಳವಾರ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್‌ ನಾಯಕರು ವಸ್ತುಸ್ಥಿತಿ ಪರಿಶೀಲಿಸದೆ, ಸುಳ್ಳು ಕಥೆಗಳನ್ನು ಸೃಷ್ಟಿಸಲು ಯತ್ನಿಸಿದರು. ಅವರಿಗೆ ಸೋಲಾಗಿದೆ’ ಎಂದರು.

‘ಮೂರ್ತಿ ಫೈಬರ್‌ನದ್ದು ಅಲ್ಲ ಹಿತ್ತಾಳೆಯದ್ದು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಈ ಕುರಿತು  ವಿಚಾರಣೆ ನಡೆಯಲಿ. ಥೀಮ್‌ ಪಾರ್ಕ್‌ ಕಾಮಗಾರಿ ಶ್ರೀಘ್ರ ಪೂರ್ಣಗೊಳಿಸಲಿ’ ಎಂದು ಒತ್ತಾಯಿಸಿದರು.

ADVERTISEMENT

‘ಕಂಚಿನ ಪ್ರತಿಮೆ ಎಲ್ಲಿದೆ?’

‘ಪರಶುರಾಮನ ಮೂರ್ತಿ ಕುರಿತು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ತಕ್ಷಣ ಕಾರ್ಕಳ ಶಾಸಕರು ಮತ್ತು ಅವರ ಬೆಂಬಲಿಗರು ವಿಚಲಿತರಾದಂತೆ ಕಾಣುತ್ತದೆ’ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಕಾಂಗ್ರೆಸ್‌ನವರಿಗೆ ಸೋಲಾಗಿದೆ ಎಂದು ಶಾಸಕರು ಹೇಳಿದ್ದಾರೆ. ಆದರೆ ಅವರು ನಿರ್ಮಿಸಿದ್ದ ಕಂಚಿನ ಪ್ರತಿಮೆ ಎಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.