ಶಿರಸಿ: ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ನಡೆಸಲು ಸಾಗಿಸುತ್ತಿದ್ದ ತಂಡವೊಂದನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಚಿಪಗಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ಬಂಧಿಸಿದ್ದು, 2360 ಕೆಜಿ ಅಕ್ಕಿ ಜಫ್ತುಪಡಿಸಿಕೊಂಡಿದ್ದಾರೆ
ಕಸ್ತೂರಬಾ ನಗರದ ಜಾಕೀರ್ ಅಯುಬ್ ಖಾನ್ (52), ನೆಹರೂ ನಗರದ ಸಲ್ಮಾನ್ ಬಶೀರ್ ಅಹ್ಮದ್ (23) ಬಂಧಿತರು. ಆರೋಪಿಗಳು ಲಾರಿಯೊಂದರಲ್ಲಿ ತಲಾ 40 ಕೆಜಿ ತೂಕದಂತೆ 59 ಚೀಲಗಳಲ್ಲಿ ತುಂಬಿಡಲಾಗಿದ್ದ ಅಕ್ಕಿಯನ್ನು ಸಾಗಿಸುತ್ತಿದ್ದರು. ಈ ಕುರಿತು ತಾಲ್ಲೂಕಾ ಆಹಾರ ನಿರೀಕ್ಷಕರು ನೀಡಿದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.