ಶಿರಸಿ: ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಮತ ಕೇಳಲು ಹೋದಾಗ ಅವರ ಮೇಲೆ ಹಲ್ಲೆ ನಡೆದ ಘಟನೆ ಬುಧವಾರ ರಾತ್ರಿ ತಾಲ್ಲೂಕಿನ ಕುಪಗಡ್ಡೆಯಲ್ಲಿ ನಡೆದಿದೆ.
ಬೆಳ್ಳನಕೇರಿಯ ಗಣೇಶ ಕ್ಷತ್ರೀಯ ಹಲ್ಲೆಗೊಳಗಾದ ಅಭ್ಯರ್ಥಿ. ಪ್ರಚಾರಕ್ಕೆ ತೆರಳಿದ್ದಾಗ ಕುಪಗಡ್ಡೆಯ ಮರ್ದಾನ ಜಬ್ಬಾರಸಾಬ ಶೇಖ್, ಅಬ್ದುಲಜಬ್ಬಾರ ಮರ್ದಾನಸಾಬ ಶೇಖ್, ನಾಸಿರ ಜಬ್ಬಾರಸಾಬ ಶೇಖ್ ಮತ್ತು ಸದ್ದಾಂ ಜಬ್ಬಾರಸಾಬ ಶೇಖ್ ತಮ್ಮ ಮೇಲೆ ನಡೆಸಿದರು.
ಜೀವ ಬೆದರಿಕೆಯನ್ನೂ ಒಡ್ಡಿದರು ಎಂದು ಗಣೇಶ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಬನವಾಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.