ADVERTISEMENT

ಬಸ್‍ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು

ಯಲ್ಲಾಪುರದ ದೇಶಪಾಂಡೆ ನಗರ ಸಮೀಪ ಸರಣಿ ಅಪಘಾತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 14:42 IST
Last Updated 9 ಅಕ್ಟೋಬರ್ 2019, 14:42 IST
ಯಲ್ಲಾಪುರ ತಾಲ್ಲೂಕಿನ ಕೋಳಿಕೇರಿ ಬಳಿಯ ದೇಶಪಾಂಡೆ ನಗರದ ಸಮೀಪ ಬುಧವಾರ ನಡೆದ ಸರಣಿ ಅಪಘಾತದಲ್ಲಿ ಬಸ್‌ಗಳು ಹಾಗೂ ಬೊಲೊರೊ ವಾಹನ ನಜ್ಜುಗುಜ್ಜಾಗಿರುವುದು
ಯಲ್ಲಾಪುರ ತಾಲ್ಲೂಕಿನ ಕೋಳಿಕೇರಿ ಬಳಿಯ ದೇಶಪಾಂಡೆ ನಗರದ ಸಮೀಪ ಬುಧವಾರ ನಡೆದ ಸರಣಿ ಅಪಘಾತದಲ್ಲಿ ಬಸ್‌ಗಳು ಹಾಗೂ ಬೊಲೊರೊ ವಾಹನ ನಜ್ಜುಗುಜ್ಜಾಗಿರುವುದು   

ಯಲ್ಲಾಪುರ: ತಾಲ್ಲೂಕಿನ ದೇಶಪಾಂಡೆ ನಗರದ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬುಧವಾರ ರಾಜ್ಯ ರಸ್ತೆ ಸಾರಿಗೆಯ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ಇದರಪರಿಣಾಮ ಒಬ್ಬ ಚಾಲಕ ಸ್ಥಳದಲ್ಲೇಮೃತಪಟ್ಟಿದ್ದಾರೆ.

15 ಜನರಿಗೆ ಗಾಯಗಳಾಗಿವೆ. ಅಪಘಾತವಾದ ಬಸ್‌ನ ಹಿಂಬದಿಗೆ ಬೊಲೇರೊವಾಹನವೊಂದು ಕೂಡ ಡಿಕ್ಕಿ ಹೊಡೆದಿದೆ.

ಕಾರವಾರದಿಂದನರಗುಂದಕ್ಕೆಹೋಗುತ್ತಿದ್ದಹಾಗೂ ಹುಬ್ಬಳ್ಳಿಯಿಂದ ಕಾರವಾರಕ್ಕೆ ಬರುತ್ತಿದ್ದಬಸ್‌ಗಳುಮುಖಾಮುಖಿ ಡಿಕ್ಕಿಯಾದವು. ಇದರ ಪರಿಣಾಮ, ಕಾರವಾರದತ್ತ ಬರುತ್ತಿದ್ದ ಬಸ್‌ ಚಾಲಕ ಯಮನಪ್ಪ ಮಾದರ ಬಿಜಾಪುರ ಸ್ಥಳದಲ್ಲೇ ಮೃತಪಟ್ಟರು. ಇನ್ನೊಂದು ಬಸ್‌ನ ಚಾಲಕ ರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.ಕೆಲವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಆಂಬುಲೆನ್ಸ್ ಅಪಘಾತ:ಅಪಘಾತದಲ್ಲಿ ಗಾಯಗೊಂಡವರನ್ನು ಕರೆದುಕೊಂಡು ಬರಲು ಹೋಗುತ್ತಿದ್ದ ತಾಲ್ಲೂಕು ಆಸ್ಪತ್ರೆಯ ನಗು–ಮಗು ಆಂಬುಲೆನ್ಸ್ ಹಳಿಯಾಳ ಕ್ರಾಸ್ ಬಳಿ ಮರಕ್ಕೆ ಗುದ್ದಿದೆ. ಇದರಿಂದ ವಾಹನದ ಮುಂಭಾಗ ಜಖಂಗೊಂಡಿದೆ.

ಅಪಘಾತದ ಮಾಹಿತಿ ಸಿಕ್ಕಿದ ತಕ್ಷಣ ಮಾಜಿ ಶಾಸಕ ಶಿವರಾಮ ಹೆಬ್ಬಾರ, ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.ಬದಲಿ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ರಸ್ತೆ ಸಂಚಾರ ಸುಗಮಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಸುಮಾರುಎರಡುಗಂಟೆವಾಹನ ಸಂಚಾರಕ್ಕೆ ತೊಂದರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.