ಕಾರವಾರ: ಮಾರುಕಟ್ಟೆಯಲ್ಲಿ ದಿನಸಿ ದರ ಸ್ಥಿರವಾಗಿದ್ದು, ಅಡುಗೆ ಎಣ್ಣೆಯಲ್ಲಿ ದರ ಏರಿಕೆ ಕಂಡುಬಂದಿದೆ. ಎರಡು ವಾರದ ಹಿಂದೆ ಲೀಟರ್ಗೆ₹ 80ರ ದರ ಹೊಂದಿದ್ದಪಾಮ್ಆಯಿಲ್ ಹಿಂದಿನ ವಾರ₹ 90ಕ್ಕೆ ಏರಿಕೆಯಾಗಿತ್ತು. ಸದ್ಯ₹ 95ರಲ್ಲಿ ಬಿಕರಿಯಾಗುತ್ತಿದೆ.
ತೊಗರಿಬೇಳೆ ಪ್ರತಿ ಕೆ.ಜಿ.ಗೆ ₹ 100ರಲ್ಲಿ ಬಿಕರಿಯಾಗುತ್ತಿದೆ.ಹೆಸರು ಬೇಳೆಗೆ ₹ 120, ಬ್ಯಾಡಗಿ ಮೆಣಸು ₹ 220, ಬಿಳಿ ಬಟಾಣಿ ₹ 80,ಹಸಿರು ಬಟಾಣಿ ₹ 140ರದರ ಹೊಂದಿದೆ. ಕೊತ್ತುಂಬರಿ₹ 160, ಗೋಧಿ₹36ರಲ್ಲಿಗ್ರಾಹಕರಿಗೆ ಸಿಗುತ್ತಿದೆ.
ಈರುಳ್ಳಿ ದರ ಇಳಿಕೆ: ತರಕಾರಿ ಮಾರುಕಟ್ಟೆಯಲ್ಲಿ ₹ 100ರಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಸದ್ಯ ₹ 80ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರತಿ ಕೆ.ಜಿ.ಗೆ ₹ 20ರಷ್ಟು ಕಡಿಮೆ ಆದಂತಾಗಿದೆ. ಕಳಪೆ ಗುಣಮಟ್ಟದ ಈರುಳ್ಳಿಯನ್ನು ₹ 60ರಲ್ಲಿ ವ್ಯಾಪಾರ ಮಾಡಲಾಗುತ್ತಿದೆ.
ಪ್ರತಿ ಕೆ.ಜಿ.ಗೆ₹ 25ರ ದರ ಹೊಂದಿದ್ದ ಆಲೂಗಡ್ಡೆ ₹ 15ರಷ್ಟುಜಾಸ್ತಿಯಾಗಿದ್ದು,₹ 40ರಲ್ಲಿ ಬಿಕರಿಯಾಗುತ್ತಿದೆ. ಟೊಮೆಟೊ ₹ 20, ಕ್ಯಾರೆಟ್₹ 80ರ ದರದಲ್ಲಿಸ್ಥಿರವಾಗಿದೆ. ಹೂಕೋಸು₹ 30, ಬೆಳ್ಳುಳ್ಳಿ₹ 200, ಬೀನ್ಸ್₹ 60ರ ದರವನ್ನು ಹೊಂದಿದೆ.
ಸೇವಂತಿಗೆ ಹೂವು ಮತ್ತು ಕಾಕಡ ಮಲ್ಲಿಗೆಯು ಒಂದು ಮಾರಿಗೆ₹ 50, ಕನಕಾಂಬರ₹ 60, ಗೊಂಡೆ ಹೂವು₹ 40, ಡೇರೆ ಹೂವು₹ 60ರ ದರ ಹೊಂದಿವೆ. ಹೂವಿನ ಹಾರ ಒಂದಕ್ಕೆ₹ 60ರಂತೆ ಮಾರಾಟವಾಗುತ್ತಿದೆ.
ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಪ್ರತಿ ಕೆ.ಜಿ.ಗೆ ₹ 120, ₹ 140, ₹ 200ರವರೆಗೂ ಇದೆ. ಸೀತಾಫಲ₹ 200ರ ದರ ಹೊಂದಿದೆ. ಕಿತ್ತಳೆ₹ 80ರಿಂದ ₹ 90ರವರೆಗಿನ ದರದಲ್ಲಿ ವಹಿವಾಟು ಕಾಣುತ್ತಿದೆ. ದ್ರಾಕ್ಷಿ₹ 160, ದಾಳಿಂಬೆ₹ 120, ಮೂಸಂಬಿ ₹ 120, ಪಪ್ಪಾಯಿ₹ 50ರ ದರದಲ್ಲಿ ಬಿಕರಿಯಾಗುತ್ತಿದೆ.
ಮೀನು ಮಾರುಕಟ್ಟೆಯಲ್ಲಿ ಪಾಂಫ್ರೆಟ್ಗೆ₹ 800ರಿಂದ₹ 900, ಕಿಂಗ್ಫಿಶ್ಗೆ₹ 1,200, ಬಂಗಡೆ ಒಂದು ಪಾಲಿಗೆ ₹ 200, ಲೆಪ್ಪೆ ಪಾಲಿಗೆ₹ 50, ಬೆಳುಂಜೆ ಪಾಲಿಗೆ₹ 100 ರಿಂದ₹ 150ರವರೆಗೆ ದರವಿದೆ.₹ 5ಕ್ಕೆ ಒಂದು ಮೊಟ್ಟೆ ಸಿಗುತ್ತಿದೆ. ಬೇಯಿಸಿದ ಮೊಟ್ಟೆಗೆ₹ 10 ಇದೆ.
ಮಾರುಕಟ್ಟೆಗೆಮಾವಿನಕಾಯಿ:ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಮಾವಿನಕಾಯಿ ಪ್ರವೇಶ ಮಾಡಿತ್ತು. ಭಾನುವಾರದ ಸಂತೆಯಲ್ಲಿ ಒಂದು ಕಡೆ ಮಾತ್ರ ಇದುಮಾರಾಟಗೊಂಡಿತು. ಅಪರೂಪದ ಮಾವಿನಕಾಯಿಯನ್ನು ತುಟ್ಟಿಯಾದರೂ ಜನ ಖರೀದಿ ಮಾಡಿದರು.₹ 100ಕ್ಕೆ ಕೇವಲ ಎರಡು ಮಾವಿನಕಾಯಿಯನ್ನು ನೀಡಲಾಗುತ್ತಿತ್ತು.
––––––––––ಅಂಕಿಅಂಶ––––––––––
ಕಾರವಾರ ಮಾರುಕಟ್ಟೆ
ತರಕಾರಿ;ದರ (₹ಗಳಲ್ಲಿ)
ಆಲೂಗಡ್ಡೆ;40
ಟೊಮೆಟೊ;20
ಕ್ಯಾರೆಟ್;80
ಬೀಟ್ರೂಟ್;60
ಕ್ಯಾಪ್ಸಿಕಂ;60
ಮೆಣಸಿನಕಾಯಿ;60
ಶುಂಠಿ;100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.