ಕಾರವಾರ: ನಗರದ ಕಾಳಿ ನದಿ ಮತ್ತು ಸಮುದ್ರದ ಅಳಿವೆ ಬಳಿಯ ಪಂಚರ್ಷಿವಾಡಾದಹಲವು ಮನೆಗಳ ಅಂಗಳಕ್ಕೆ ಭಾನುವಾರಕೊಳಚೆ ನೀರು ಹರಿಯಿತು.
ಕಾಜುಭಾಗ, ಕ್ವಾರ್ಟರ್ಸ್ಪ್ರದೇಶದಿಂದಮಳೆ ನೀರು ಹರಿದು ಬಂದು ಸಮುದ್ರ ಸೇರಲು ನಿರ್ಮಿಸಿದ ಚರಂಡಿ ಇಲ್ಲಿದೆ. ಅದರಲ್ಲಿ ಗಿಡಗಂಟೆಗಳು ಬೆಳೆದು ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಜೊತೆಗೇಎರಡು ದಿನಗಳಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹೀಗಾಗಿ ಚರಂಡಿಯಲ್ಲಿ ನೀರು ಉಕ್ಕಿ ಹರಿದು ಮನೆಗಳ ಅಂಗಳ, ರಸ್ತೆಗಳಲ್ಲಿ ತುಂಬಿಕೊಂಡಿತು.
‘ಎರಡು ದಿನಗಳಿಂದ ಈ ರೀತಿಯಾಗುತ್ತಿದೆ. ಸುಮಾರು 25 ಮನೆಗಳಿಗೆ ತೊಂದರೆಯಾಗಿದೆ. ಏಕಾಏಕಿ ನೀರು ತುಂಬಿಕೊಂಡು, ಅರ್ಧ ಗಂಟೆಯ ಅವಧಿಯಲ್ಲಿ ಮತ್ತೆ ಹರಿದು ಹೋಗುತ್ತಿದೆ. ಜನಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳೂ ಹರಡುವ ಆತಂಕವಿದೆ’ ಎಂದು ಸ್ಥಳೀಯರಾದ ಚಂದ್ರಶೇಖರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.