ADVERTISEMENT

ಬಿಜೆಪಿ ಎಷ್ಟಾದರೂ ನಿಗಮ ಮಾಡಬಹುದು: ಡಿಕೆಶಿ ಟೀಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:12 IST
Last Updated 27 ನವೆಂಬರ್ 2020, 16:12 IST
ಕಾರವಾರಕ್ಕೆ ಶುಕ್ರವಾರ ಭೇಟಿ ನೀಡಿದ ಕೆ‍.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷದ ಮುಖಂಡ ಸತೀಶ ಸೈಲ್ ಹಾಗೂ ಇತರರು ಸ್ವಾಗತಿಸಿದರು
ಕಾರವಾರಕ್ಕೆ ಶುಕ್ರವಾರ ಭೇಟಿ ನೀಡಿದ ಕೆ‍.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷದ ಮುಖಂಡ ಸತೀಶ ಸೈಲ್ ಹಾಗೂ ಇತರರು ಸ್ವಾಗತಿಸಿದರು   

ಕಾರವಾರ: ‘ಬಿ.ಜೆ.ಪಿ.ಯವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹಳ ಶಕ್ತಿಯಿದೆ. ಅವರು ಎಷ್ಟು ಬೇಕಾದರೂ ನಿಗಮಗಳು, ಯಾವ ಸಮಾಜಕ್ಕಾದರೂ ಸ್ಥಾನಮಾನಗಳನ್ನು ಕೊಡಬಹುದು’ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.

ಶಿರಸಿಯಲ್ಲಿ ಶನಿವಾರ ನಡೆಯಲಿರುವ ಪಕ್ಷದ ಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಸಂಜೆ ಕಾರವಾರಕ್ಕೆ ಅವರು ಬಂದಾಗ ಸುದ್ದಿಗಾರರ ಜೊತೆ ಮಾತನಾಡಿದರು.

‘ಬಿ.ಜೆ.ಪಿ.ಯ ಕಾರ್ಯಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅವರೇನು ಬೇಕಾದರೂ ಮಾಡಲಿ. ಅವರು ತಮ್ಮನ್ನು ತಾವು ಸರ್ವತಂತ್ರ ಸ್ವತಂತ್ರರು ಎಂದುಕೊಂಡಿದ್ದಾರೆ. ಅವರ ಬಳಿ ಅಧಿಕಾರವಿದೆ. ಅದೇನು ಮಾಡುತ್ತಾರೋ ಎಲ್ಲವನ್ನೂ ಮಾಡಲಿ, ನೋಡೋಣ’ ಎಂದು ಹೇಳಿದರು.

ADVERTISEMENT

ಬಿ.ಜೆ.ಪಿ.ಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಇಲ್ಲಿಂದ (ಬೇರೆ ಪಕ್ಷಗಳಿಂದ) ಹೋದ ಕೆಲವರು ಅವರಿಗೇನು ಉಡುಗೊರೆ ಕೊಡಬೇಕೋ ಅದನ್ನು ಕೊಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.