ಶಿರಸಿ: ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡಿದ ಪ್ರಕರಣದ ಆರೋಪದ ಮೇಲೆ ಪೊಲೀಸರು ಕಾರಿನ ಮಾಲೀಕರೊಬ್ಬರಿಗೆ ₹ 2000 ದಂಡ ಹಾಕಿದ್ದಾರೆ.
ಇಲ್ಲಿನ ನಿಲೇಕಣಿಯ ಪ್ರದೀಪ ನಾಯ್ಕ ಎಂಬುವವರಿಗೆ ಕಾರು ನಂಬರ್ ಸಹಿತ ದಂಡದ ಪಾವತಿ ಪತ್ರ ಮನೆಗೆ ಬಂದಿದೆ. ನಗರ ಠಾಣೆಯಿಂದ ನೀಡಿರುವ ಈ ಪತ್ರದಲ್ಲಿ ಯಾವ ಕಾರಣಕ್ಕಾಗಿ ದಂಡ ಹಾಗೂ ದಂಡದ ಮೊತ್ತವನ್ನು ನಮೂದಿಸಲಾಗಿದೆ.
‘ಪೊಲೀಸರ ತಪಾಸಣೆ ಎಷ್ಟೊಂದು ಅವೈಜ್ಞಾನಿಕ ಎಂಬುದಕ್ಕೆ ಈ ಪತ್ರ ಸಾಕ್ಷಿಯಾಗಿದೆ. ಬೈಕ್ಗೆ ಅನ್ವಯವಾಗುವ ನಿಯಮವನ್ನು ಕಾರಿಗೆ ಅನ್ವಯಿಸಿ, ದಂಡ ಹಾಕಲಾಗಿದೆ. ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದು ಕಡ್ಡಾಯವಾದಂತೆ, ಇಲಾಖೆ ಕೂಡ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ಮುಖ್ಯ’ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.