
ಪ್ರಜಾವಾಣಿ ವಾರ್ತೆಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ದಾಂಡೇಲಿ: ನಗರದ ವಿದ್ಯುತ್ ಸರಬರಾಜು 11 ಕೆವಿ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಫೆ.25 ರಂದು ನಗರದ ವಿವಿಧಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಅಂಬೇವಾಡಿ, ಇಂಡಸ್ಟ್ರೀಯಲ್ ಏರಿಯಾ, ಗಣೇಶನಗರ, ಸಾಯಿನಗರ, ಮಾರುತಿನಗರ, ಗಾಂಧಿನಗರ, 14th ಬ್ಲಾಕ್, ಗೌಂಟನ್, ಟೌನ್ಶಿಪ್, ವನಶ್ರೀನಗರ, ವಿಜಯನಗರ, ಈಡಬ್ಲುಎಸ್, ಕೆಎಚ್ಬಿ ಕಾಲೊನಿ, ಬಸವೇಶ್ವರ ನಗರ, ಸುಭಾಸ್ ನಗರ, ಅಜಾದ್ ನಗರ, ಜೆ.ಎನ್ ರೋಡ್, ಬಾಂಬೆ ಚಾಳ, ಸೊಮನಿ ಸರ್ಕಲ್ ಹಾಗೂ ರವಿವಾರ ಪೇಟೆ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.