ADVERTISEMENT

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬೇಸಿಗೆ ಮಳೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 13:33 IST
Last Updated 25 ಮಾರ್ಚ್ 2019, 13:33 IST
ಶಿರಸಿಯಲ್ಲಿ ಸೋಮವಾರ ಸುರಿದ ಮಳೆಗೆ ಅಶ್ವಿನಿ ವೃತ್ತದಲ್ಲಿ ರಸ್ತೆಯ ಮೇಲೆ ನೀರು ಹರಿಯಿತು
ಶಿರಸಿಯಲ್ಲಿ ಸೋಮವಾರ ಸುರಿದ ಮಳೆಗೆ ಅಶ್ವಿನಿ ವೃತ್ತದಲ್ಲಿ ರಸ್ತೆಯ ಮೇಲೆ ನೀರು ಹರಿಯಿತು   

ಕಾರವಾರ/ ಶಿರಸಿ:ಪ್ರಖರ ಬಿಸಿಲಿನಿಂದ ಕಂಗೆಟ್ಟಿದ್ದಜಿಲ್ಲೆಯ ವಿವಿಧೆಡೆಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಶಿರಸಿಯಲ್ಲಿ20ನಿಮಿಷ ಗುಡುಗು, ಸಿಡಿಲಿನೊಂದಿಗೆ ರಭಸದ ಮಳೆ‌ ಸುರಿಯಿತು. ತಣ್ಣನೆಯ ಗಾಳಿ ಬೀಸಿ ಸೆಕೆ ಕಡಿಮೆಯಾಯಿತು. ಹನಿಗಳಿಗೆ ಮೈಯೊಡ್ಡಿದ ಜನರು ಅಕಾಲಿಕ ಮಳೆಯಲ್ಲಿಸಂಭ್ರಮಿಸಿದರು.

ಮುಂಡಗೋಡ ತಾಲ್ಲೂಕಿನ ಮೈನಳ್ಳಿ, ಗುಂಜಾವತಿ, ಉಗ್ಗಿನಕೇರಿ, ಇಂದೂರ, ನಂದಿಗಟ್ಟಾ, ಸನವಳ್ಳಿ ಪ್ಲಾಟ್‌, ಹುನಗುಂದ, ಮುಂಡಗೋಡ ಪಟ್ಟಣ ಸೇರಿದಂತೆ ಹಲವೆಡೆ ಅರ್ಧ ಗಂಟೆ ತುಂತುರು ಮಳೆ ಬಂತು. ನೆತ್ತಿ ಸುಡುತ್ತಿದ್ದಮಧ್ಯಾಹ್ನ ಏಕಾಏಕಿರಭಸದ ಗಾಳಿ ಬೀಸಿಆಕಾಶವಿಡೀ ಕರಿಮೋಡಗಳಿಂದ ತುಂಬಿಕೊಂಡಿತು. ಬೆಳಿಗ್ಗೆಯಿಂದ ಇದ್ದ ವಾತಾವರಣ ಅರ್ಧ ಗಂಟೆಯಲ್ಲಿ ಬದಲಾಗಿತ್ತು. ಆಗಾಗ ಗುಡುಗಿನ ಶಬ್ದ ಕೇಳುತ್ತಿತ್ತು.

ಹಳಿಯಾಳ, ದಾಂಡೇಲಿ, ಯಲ್ಲಾಪುರತಾಲ್ಲೂಕುಗಳವಿವಿಧೆಡೆಯೂ ತುಂತುರು ಮಳೆಯಾಯಿತು. ರಭಸದ ಗಾಳಿಯೂ ಬೀಸಿ ಸ್ವಲ್ಪ ಆತಂಕ ಸೃಷ್ಟಿಸಿತ್ತು. ಹಳಿಯಾಳ ತಾಲ್ಲೂಕಿನ ಮುರ್ಕವಾಡದಲ್ಲಿ ಮರವೊಂದು ರಸ್ತೆ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.

ADVERTISEMENT

ಕರಾವಳಿ ಭಾಗದಲ್ಲಿ ಸೋಮವಾರ ಸೆಕೆ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಬರಲು ಹಿಂದೇಟು ಹಾಕುವ ರೀತಿಯಲ್ಲಿ ಬಿಸಿಲಿತ್ತು. ಬೆಳಿಗ್ಗೆ ಮತ್ತು ಸಂಜೆ ಅಲ್ಲಲ್ಲಿ ಮೋಡ ಕವಿದ ವಾತಾವರಣವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.