ಕಾರವಾರ: ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ– ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೂರು ದಿನ ನಡೆದ ಟೂರ್ನಿಯ ಫೈನಲ್ ಪಂದ್ಯಗಳು ಶನಿವಾರ ನೆರವೇರಿದವು.
ಆಯ್ಕೆಯಾದ 14 ವರ್ಷದ ಒಳಗಿನ (ಬಾಲಕರು):
ಶಿರಸಿಯ ಅಭಿನೀತ್ ಭಟ್, ಶಿವಮೊಗ್ಗದ ತೇಜಸ್ ಎಂ.ಶೆಣೈ, ಬಳ್ಳಾರಿಯ ನಂದನ್ ಎಂ.ಎಂ.ಬಿ, ಶಿವಮೊಗ್ಗದ ವಿಲಾಸ ಅಂದ್ರಾಡೆ ಹಾಗೂ ಮೈಸೂರಿನ ಹೃತ್ವಿಕ್.ಆರ್.
ಬಾಲಕಿಯರು:
ಕೊಡಗಿನ ಅನೀಶಾ ಎಚ್.ದೇವಾಡಿಗ, ಮೈಸೂರಿನ ಸಹನಾ ಕೆ.ಎನ್, ಶಿವಮೊಗ್ಗದ ಪಾವನಿ.ಆರ್, ಮಂಗಳೂರಿನ ರಿಶಲ್ಲೆ ಡಿಸೋಜಾ, ಉತ್ತರ ಕನ್ನಡದ ಸಿಂಚನಾ ಜಿ.ಭಟ್.
17 ವರ್ಷದ ಒಳಗಿನ ಬಾಲಕರು:
ಬೆಂಗಳೂರು ಉತ್ತರದ ತೇಜಸ್.ಕೆ, ಧಾರವಾಡದ ಸಚಿನ್.ಪೈ, ಮೈಸೂರಿನ ಕಾರ್ತಿಕ್.ಪಿ, ಮಂಗಳೂರಿನವರಾದ ನಿನಾದ ಎಸ್.ಎ ಮತ್ತು ಧನುಷ್ ರಾಮ್.ಎಂ.
ಬಾಲಕಿಯರು:
ಉಡುಪಿಯ ಶಾನ್ವಿ ಎಸ್.ಬಲ್ಲಾಳ್, ಮೈಸೂರಿನ ಅನಘಾ ಕೆ.ಜಿ.ಆರ್, ಉಡುಪಿಯವರಾದ ದಿಶಾ ಯು.ಎ ಮತ್ತು ಯಶಸ್ವಿ, ಮಂಡ್ಯದ ಯಶಸ್ವಿ ಎಸ್.ಕಿರಣ್.
ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.