ADVERTISEMENT

ನೌಕಾನೆಲೆಗೆ ವೈಸ್ ಅಡ್ಮಿರಲ್ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 13:06 IST
Last Updated 30 ಸೆಪ್ಟೆಂಬರ್ 2019, 13:06 IST
ನೌಕಾಪಡೆಯ ವೈಸ್ ಅಡ್ಮಿರಲ್ ಪಿ.ಅಜಿತ್ ಕುಮಾರ್ ಕಾರವಾರದ ಸೀಬರ್ಡ್ ನೌಕಾನೆಲೆಗೆ ಸೋಮವಾರ ಭೇಟಿ ನೀಡಿ, ಸಿಬ್ಬಂದಿಯ ಉಭಯಕುಶಲೋಪರಿ ವಿಚಾರಿಸಿದರು
ನೌಕಾಪಡೆಯ ವೈಸ್ ಅಡ್ಮಿರಲ್ ಪಿ.ಅಜಿತ್ ಕುಮಾರ್ ಕಾರವಾರದ ಸೀಬರ್ಡ್ ನೌಕಾನೆಲೆಗೆ ಸೋಮವಾರ ಭೇಟಿ ನೀಡಿ, ಸಿಬ್ಬಂದಿಯ ಉಭಯಕುಶಲೋಪರಿ ವಿಚಾರಿಸಿದರು   

ಕಾರವಾರ: ನೌಕಾಪಡೆಯ ವೈಸ್ ಅಡ್ಮಿರಲ್ ಪಿ.ಅಜಿತ್ ಕುಮಾರ್ ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೌಕಾನೆಲೆಯ ಕಾರ್ಯಸನ್ನದ್ಧ ಸ್ಥಿತಿಯನ್ನು ಪರಿಶೀಲಿಸಿದರು.

ನೌಕಾನೆಲೆಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಕಾಮಗಾರಿಗಳ ಬಗ್ಗೆಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಮಾಹಿತಿ ನೀಡಿದರು. ನೌಕಾನೆಲೆಯಲ್ಲಿರುವ ಸೌಲಭ್ಯಗಳ ಹಾಗೂ ಅಗತ್ಯತೆಗಳ ಸಂಪೂರ್ಣ ಮಾಹಿತಿಯನ್ನು ಅವರು ಪಡೆದುಕೊಂಡರು.

ಇದೇವೇಳೆ ನೌಕಾನೆಲೆ ಹಡಗು ದುರಸ್ತಿ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಸಿವಿಲಿಯನ್ ಸಿಬ್ಬಂದಿಯನ್ನು ಭೇಟಿ ಮಾಡಿದರು. ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ಉಭಯ ಕುಶಲೋಪರಿ ವಿಚಾರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.