ADVERTISEMENT

ಹೊಸಪೇಟೆ (ವಿಜಯನಗರ): ಮುಗುಚಿ ಬಿದ್ದ ಆಟೊ, ಐವರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 12:13 IST
Last Updated 29 ಜೂನ್ 2021, 12:13 IST
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮುಗುಚಿ ಬಿದ್ದ ಆಟೊ
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮುಗುಚಿ ಬಿದ್ದ ಆಟೊ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ವಡ್ಡರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮಂಗಳವಾರ ಆಟೊ ಮುಗುಚಿ ಬಿದ್ದದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

‘ತಾಲ್ಲೂಕಿನ ಮಲಪನಗುಡಿಯಿಂದ ಸಂಡೂರು ಜಿಲ್ಲೆಯ ತೋರಣಗಲ್ಲಿಗೆ ಒಂದೇ ಕುಟುಂಬದ ಐದು ಜನ ಆಟೊದಲ್ಲಿ ಹೋಗುತ್ತಿದ್ದರು. ವಡ್ಡರಹಳ್ಳಿಯ ನಾಗಪ್ಪ ಕ್ಯಾಂಪ್‌ ಬಳಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಆಟೊ ರಸ್ತೆ ಬದಿಮುಗುಚಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಗಾಯಗೊಂಡವರನ್ನು ಆಟೊದಿಂದ ಹೊರತಂದಿದ್ದಾರೆ. ಬಳಿಕ ಗಾಯಗೊಂಡವರನ್ನು ಆಂಬುಲೆನ್ಸ್‌ ಮೂಲಕ ಬಳ್ಳಾರಿಯ ವಿಮ್ಸ್‌ಗೆ ಕಳುಹಿಸಿಕೊಡಲು ನೆರವಾಗಿದ್ದಾರೆ. ಯಾರಿಗೂ ಪ್ರಾಣಾಪಾಯವಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT