ADVERTISEMENT

ಮಕರ ಸಂಕ್ರಮಣ; ಹಂಪಿಯಲ್ಲಿ ಪುಣ್ಯ ಸ್ನಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:54 IST
Last Updated 15 ಜನವರಿ 2023, 5:54 IST
 ಹಂಪಿಯಲ್ಲಿ ಪುಣ್ಯ ಸ್ನಾನ
ಹಂಪಿಯಲ್ಲಿ ಪುಣ್ಯ ಸ್ನಾನ   

ಹೊಸಪೇಟೆ (ವಿಜಯನಗರ): ಮಕರ ಸಂಕ್ರಮಣದ ಅಂಗವಾಗಿ ತಾಲ್ಲೂಕಿನ ಹಂಪಿ‌ ಸಮೀಪದ ತುಂಗಭದ್ರಾ ನದಿಯಲ್ಲಿ ಅಪಾರ ಜನ ಭಾನುವಾರ ಪುಣ್ಯಸ್ನಾನ ಮಾಡಿದರು.

ಶನಿವಾರ ಸಂಜೆಯೇ ವಿವಿಧ ಕಡೆಗಳಿಂದ ಅಪಾರ ಭಕ್ತರು ಹಂಪಿಗೆ ಬಂದು ತಂಗಿದ್ದರು. ಭಾನುವಾರ ಬೆಳಕು ಹರಿಯುತ್ತಿದ್ದಂತೆ ಮೈಕೊರೆಯುವ ಚಳಿಯಲ್ಲಿ ಜನ ತುಂಗಭದ್ರೆಯಲ್ಲಿ ಮಿಂದೆದ್ದರು. ಅನಂತರ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದರು. ಎಳ್ಳು, ಬೆಲ್ಲ ವಿನಿಮಯ ಮಾಡಿಕೊಂಡು ಪರಸ್ಪರ ಶುಭ ಕೋರಿದರು. ಬಳಿಕ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಂಡು, ಜೊತೆಗೆ ತಂದಿದ್ದ ಬುತ್ತಿ ತೆಗೆದು ಆಹಾರ ಸವಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಹಂಪಿಯಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.