ಹೊಸಪೇಟೆ (ವಿಜಯನಗರ): ನಗರದ ಕಾಲೇಜು ರಸ್ತೆಯಲ್ಲಿ ಎಳನೀರು ಮಾರಾಟ ಮಾಡುವ ಹುಲುಗಪ್ಪ ಎಂಬುವರು ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಸ್ಲೇಟ್, ನೋಟ್ಬುಕ್ಗಳನ್ನು ಗುರುವಾರ ವಿತರಿಸಿದರು.
ತಾಲ್ಲೂಕಿನ ಕಮಲಾಪುರದ ಜೈಭೀಮ್ ನಗರದ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಲೇಟ್, ನೋಟ್ಬುಕ್ಗಳನ್ನು ಹಂಚಿದರು. ‘ನನಗಂತೂ ಓದಲು ಸಾಧ್ಯವಾಗಿಲ್ಲ. ಓದುವ ಮಕ್ಕಳಿಗೆ ನನ್ನಿಂದ ಸಣ್ಣ ಕೊಡುಗೆ ಕೊಡಬೇಕೆಂದು ಎಳನೀರು ಮಾರಾಟದಿಂದ ಉಳಿತಾಯ ಮಾಡಿದ ಹಣದಿಂದ ಸ್ಲೇಟ್, ನೋಟ್ಬುಕ್ಗಳನ್ನು ವಿತರಿಸಿರುವೆ’ ಎಂದು ಹುಲುಗಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.