
ಪ್ರಜಾವಾಣಿ ವಾರ್ತೆ
ಹೊಸಪೇಟೆ: ಗೃಹರಕ್ಷಕ ದಳದಲ್ಲಿ ಶ್ಲಾಘನೀಯ ಸೇವೆಯನ್ನು ಗುರುತಿಸಿ ಹೊಸಪೇಟೆಯ ಪ್ಲಟೂನ್ ಕಮಾಂಡರ್ ಎಲ್.ವಾಲ್ಯಾನಾಯ್ಕ ಅವರಿಗೆ ರಾಜ್ಯ ಸರ್ಕಾರ 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ ಮಾಡಿದೆ.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಬಸವರಾಜ ಆಗಸರ್, ಜಿಲ್ಲಾ ಬೋಧಕ ಪ್ರಶಾಂತ್ ಪಾಟೀಲ್, ಹೊಸಪೇಟೆ ಘಟಕದ ಘಟಕಾಧಿಕಾರಿ ಎಸ್. ಎಂ. ಗಿರೀಶ್ ಕಮಲಾಪುರದ ಘಟಕಾಧಿಕಾರಿಗಳಾದ ವಿ. ಪರಶುರಾಮ್, ಸಂತೋಷ್ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.