ADVERTISEMENT

ಶೀಲ ಶಂಕೆ: ಕತ್ತು ಕೊಯ್ದು ಪತ್ನಿ ಕೊಲೆ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 7:00 IST
Last Updated 19 ಫೆಬ್ರುವರಿ 2023, 7:00 IST
ಬಂಗಿ ಮಲ್ಲಪ್ಪ
ಬಂಗಿ ಮಲ್ಲಪ್ಪ   

ಹೊಸಪೇಟೆ (ವಿಜಯನಗರ): ಪತ್ನಿಯ ಶೀಲ ಶಂಕಿಸಿದ ಗಂಡ ಆಕೆಯ ಹೊಟ್ಟೆಗೆ ಕಬ್ಬಿಣದ ಹಾರೆ ತಿವಿದು, ಚಾಕುವಿನಿಂದ ಕುತ್ತಿಗೆ ಕೊಯ್ದು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರದಾಪುರದಲ್ಲಿ ಭಾನುವಾರ ನಡೆದಿದೆ.

ಬಂಗಿ ಲಕ್ಷ್ಮಿ (31) ಮೃತ ಮಹಿಳೆ. ದುಷ್ಕೃತ್ಯ ಎಸಗಿದ ಬಂಗಿ ಮಲ್ಲಪ್ಪನನ್ನು ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೃತ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.