ADVERTISEMENT

ಕೆಕೆಆರ್‌ಟಿಸಿ ಫೋನ್ ಇನ್ ಮಾರ್ಚ್ 3ರಂದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 14:27 IST
Last Updated 25 ಫೆಬ್ರುವರಿ 2025, 14:27 IST
<div class="paragraphs"><p>  ಕೆಕೆಆರ್‌ಟಿಸಿ ಬಸ್‌ಗಳು</p></div>

ಕೆಕೆಆರ್‌ಟಿಸಿ ಬಸ್‌ಗಳು

   

ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಹೊಸಪೇಟೆ ವಿಭಾಗದಿಂದ ಸಮರ್ಪಕ ಬಸ್ ಸಂಚಾರ ಕುರಿತು ಮಾರ್ಚ್ 3ರಂದು ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು, ಪ್ರಯಾಣಿಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಬಸ್‌ಗಳ ಸಂಚಾರದಲ್ಲಿ ಉಂಟಾಗುತ್ತಿರುವ ಕುಂದು- ಕೊರತೆ ಹಾಗೂ ಸಮಸ್ಯೆಗಳ ಕುರಿತು ಮಾರ್ಚ್ 3 ರಂದು ಮಧ್ಯಾಹ್ನ 3.30ರಿಂದ 4.30ವರೆಗೆ ದೂ: 77609 92314,776099 2317ಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಬಹುದು. ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.