ADVERTISEMENT

ವಿಜಯನಗರ: ಕೃಷ್ಣದೇವರಾಯ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 10:58 IST
Last Updated 17 ಜನವರಿ 2022, 10:58 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಶ್ರೀ ಕೃಷ್ಣದೇವರಾಯನ ಜಯಂತಿ ಆಚರಿಸಲಾಯಿತು
ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಶ್ರೀ ಕೃಷ್ಣದೇವರಾಯನ ಜಯಂತಿ ಆಚರಿಸಲಾಯಿತು   

ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯನ ಜಯಂತಿ ಸೋಮವಾರ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಆಚರಿಸಲಾಯಿತು.

ಪಟ್ಟಣದ ಕೃಷ್ಣದೇವರಾಯ ಪುತ್ಥಳಿಗೆ ವಿಜಯನಗರ ಸ್ಮಾಕರ ಸಂಸ್ಕೃತಿ ಸಂರಕ್ಷಣ ಸೇನೆ, ವಾಲ್ಮೀಕಿ ಸಮಾಜ, ಪ್ರವಾಸಿ ಮಾರ್ಗದರ್ಶಿಗಳು ಮಾಲಾರ್ಪಣೆ ಮಾಡಿದರು.

ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಮಾತನಾಡಿ, ವಿಜಯನಗರ ಸಾಮ್ರಾಜ್ಯಕ್ಕೆ ಕೃಷ್ಣದೇವರಾಯನ ಕೊಡುಗೆ ದೊಡ್ಡದು. ಆತನ ಸ್ಮರಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.

ADVERTISEMENT

ಈರಣ್ಣ ಪೂಜಾರಿ, ವೀರೇಶ್, ರಾಚಯ್ಯ, ಭರಮಪ್ಪ, ಬಸಪ್ಪ ಕಡ್ಲೇರ್, ಗೋಪಾಲ್, ಲೋಕೋಭಿರಾಮ, ಭಾನು ಪ್ರಕಾಶ್, ನಾಗರಾಜ್, ಕುಪೇಂದ್ರ, ಹನುಮಂತ, ವೀರಭದ್ರ, ವಿರೂಪಾಕ್ಷ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.