ADVERTISEMENT

ಬಿಜೆಪಿ ನವಶಕ್ತಿ ಎಸ್ಟಿ ಸಮಾವೇಶ: ಬಸ್ ಇಲ್ಲದೆ ಜನ ಹೈರಾಣ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 12:36 IST
Last Updated 20 ನವೆಂಬರ್ 2022, 12:36 IST
   

ಹೊಸಪೇಟೆ (ವಿಜಯನಗರ): ಬಳ್ಳಾರಿಯಲ್ಲಿ ಆಯೋಜಿಸಿದ್ದ ಬಿಜೆಪಿ ನವಶಕ್ತಿ ಎಸ್ಟಿ ಸಮಾವೇಶಕ್ಕೆ ಒಪ್ಪಂದದ‌ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ತೆರಳಿರುವುದರಿಂದ ಜನ ನಗರದ ನಿಲ್ದಾಣದಲ್ಲಿ ಭಾನುವಾರ ಬಸ್ ಗಾಗಿ ಕಾದು ಕಾದು ಸುಸ್ತಾದರು.

ಹೊಸಪೇಟೆ ವಿಭಾಗದ 400ಕ್ಕೂ ಅಧಿಕ ಬಸ್ಸುಗಳು ಸಮಾವೇಶಕ್ಕೆ‌ತೆರಳಿದ್ದವು. ಅಂತರ ಜಿಲ್ಲಾ ಬಸ್ ಗಳು ಎಂದಿನಂತೆ ಸಂಚರಿಸಿದವು. ಜಿಲ್ಲೆಯ ಬಸ್ಸುಗಳು ಇರದ ಕಾರಣ ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಸಾಧ್ಯವಾಗಲಿಲ್ಲ.

ಖಾಸಗಿ ವಾಹನಗಳು ಕೂಡ ಸಮಾವೇಶಕ್ಕೆ ತೆರಳಿದ್ದರಿಂದ ಜನರಿಗೆ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ‌. ದಿನವಿಡೀ ನಗರದ ಬಸ್ ನಿಲ್ದಾಣದಲ್ಲೇ ಕಾಲ ಕಳೆದರು.

ADVERTISEMENT

ಸಂಜೆಯ ವೇಳಾಗಾದರೂ ಬಸ್ ಬರಬಹುದೆಂಬ ನಿರೀಕ್ಷೆ ಹುಸಿಯಾಯಿತು. ಗೊಣಗುತ್ತಲೇ ನಿಲ್ದಾಣದಲ್ಲಿ ಕಾದುನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.