ADVERTISEMENT

ಖಾಸಗಿ ಬಸ್‌ಗೆ ಆಕಸ್ಮಿಕ ಬೆಂಕಿ; 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 2:35 IST
Last Updated 11 ಸೆಪ್ಟೆಂಬರ್ 2023, 2:35 IST
<div class="paragraphs"><p>ಬೆಂಗಳೂರಿನಿಂದ ಹಟ್ಟಿಚಿನ್ನದಗಣಿ ಕಡೆ ತೆರಳುತ್ತಿದ್ದ 'ನಾಗಶ್ರೀ' ಬಸ್‌ನ ಟೈರ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ.</p></div>

ಬೆಂಗಳೂರಿನಿಂದ ಹಟ್ಟಿಚಿನ್ನದಗಣಿ ಕಡೆ ತೆರಳುತ್ತಿದ್ದ 'ನಾಗಶ್ರೀ' ಬಸ್‌ನ ಟೈರ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ.

   

ಕಾನಹೊಸಹಳ್ಳಿ(ವಿಜಯನಗರ): ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಆಕಸ್ಮಿಕವಾಗಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿರುವ ಘಟನೆ ಸೋಮವಾರ ಬೆಳಗಿನ‌ ಜಾವ ನಡೆದಿದೆ.

ಬೆಂಗಳೂರಿನಿಂದ ಹಟ್ಟಿಚಿನ್ನದಗಣಿ ಕಡೆ ತೆರಳುತ್ತಿದ್ದ 'ನಾಗಶ್ರೀ' ಬಸ್‌ನ ಟೈರ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಸ್ ಧಗ-ಧಗನೇ ಹೊತ್ತಿ ಉರಿದಿದೆ.

ADVERTISEMENT

ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿ ಸಂಚರಿಸುತ್ತಿದ್ದ 30 ಜನರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಯಾರಿಗೂ ಯಾವುದೇ ಅಪಾಯ ಆಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನಹೊಸಹಳ್ಳಿ ಪಿಎಸ್ಐ ಎರಿಯಪ್ಪ ನೇತೃತ್ವದಲ್ಲಿ ಎರಡು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.