ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಕೊನೆಗೂ ರಸ್ತೆ ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 11:20 IST
Last Updated 12 ಆಗಸ್ಟ್ 2021, 11:20 IST
ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿರುವ ದೃಶ್ಯ
ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿರುವ ದೃಶ್ಯ    

ಹೊಸಪೇಟೆ (ವಿಜಯನಗರ): ನಗರದ ಏಳನೇ ವಾರ್ಡಿನ ಪಾಂಡುರಂಗ ಕಾಲೊನಿಯಲ್ಲಿ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಯನ್ನು ಕೊನೆಗೂ ಪೂರ್ಣಗೊಳಿಸಲಾಗಿದೆ.

‘ಅಪೂರ್ಣ ಕಾಮಗಾರಿ; ಸಂಕಷ್ಟ’ ಶೀರ್ಷಿಕೆ ಅಡಿ ಜು. 23ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆಯು ಗುರುವಾರ (ಆ.12) ಕಾಮಗಾರಿ ಪೂರ್ಣಗೊಳಿಸಿದೆ.

‘ಕಾಮಗಾರಿಗೆ ಅರ್ಧಕ್ಕೆ ನಿಲ್ಲಿಸಿದ್ದರಿಂದ ಜನ ಓಡಾಡಲು ಬಹಳ ತೊಂದರೆಯಾಗುತ್ತಿತ್ತು. ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿ ಬೆನ್ನಲ್ಲೆ ಕಾಮಗಾರಿ ಆರಂಭಿಸಿದರು. ಈಗ ಕೆಲಸ ಪೂರ್ಣಗೊಂಡಿದ್ದು, ಖುಷಿಯಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.