ADVERTISEMENT

ಹೊಸಪೇಟೆ: ಚರ್ಚ್ ಆವರಣದಲ್ಲಿ ಸಂಕ್ರಾಂತಿ ಆಚರಿಸಿದ ಕ್ಯಾಥೊಲಿಕ್ ಕ್ರೈಸ್ತರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 19:12 IST
Last Updated 15 ಜನವರಿ 2022, 19:12 IST
ಹೊಸಪೇಟೆಯ ಸೆಕ್ರಡ್ ಹಾರ್ಟ್ ಚರ್ಚ್ ಆವರಣದಲ್ಲಿ ಕ್ರೈಸ್ತರು ಶನಿವಾರ ಸಂಕ್ರಾಂತಿ ಆಚರಿಸಿದರು. ಧರ್ಮಗುರು ಆರೋಗ್ಯನಾಥನ್ ಅವರು ಇದ್ದರು.
ಹೊಸಪೇಟೆಯ ಸೆಕ್ರಡ್ ಹಾರ್ಟ್ ಚರ್ಚ್ ಆವರಣದಲ್ಲಿ ಕ್ರೈಸ್ತರು ಶನಿವಾರ ಸಂಕ್ರಾಂತಿ ಆಚರಿಸಿದರು. ಧರ್ಮಗುರು ಆರೋಗ್ಯನಾಥನ್ ಅವರು ಇದ್ದರು.   

ಹೊಸಪೇಟೆ: ನಗರದ ಸೆಕ್ರಡ್ ಹಾರ್ಟ್ ಚರ್ಚ್ ಆವರಣದಲ್ಲಿ ಕ್ಯಾಥೊಲಿಕ್ ಕ್ರೈಸ್ತರು ಶನಿವಾರ ಸಂಕ್ರಾಂತಿ ಆಚರಿಸಿದರು.

ಪ್ರಾರ್ಥನಾ ಮಂದಿರ ಒಳಗಿನ ಪೂಜಾ ಪೀಠವನ್ನು ಕಬ್ಬಿನ ದಂಟು, ಹೂವಿನಿಂದ ಸಿಂಗರಿಸಿದ್ದರು. ಚರ್ಚ್ ಆವರಣದಲ್ಲಿ ಗಡಿಪೊಂಗಲ್ ತಯಾರಿಸಿ ವಿತರಿಸಿದರು. ಶುಭಾಶಯ ವಿನಿಮಯ ಮಾಡಿಕೊಂಡರು.

ಧರ್ಮಗುರು ಆರೋಗ್ಯನಾಥನ್, ‘ಪ್ರಕೃತಿ ಬದಲಾವಣೆ ಕಾಲವೇ ಸಂಕ್ರಾಂತಿ. ಸುಗ್ಗಿ ಆಚರಣೆಗೆ ರೈತರು ಕಾಯುತ್ತಾರೆ. ಅವರು ಬೆಳೆದ ಫಸಲು ತಿಂದು ನಾವು ಆರೋಗ್ಯವಾಗಿದ್ದೇವೆ. ಅವರ ಋಣ ದೊಡ್ಡದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.