ವಿಜಾಪುರ: ತಾಲ್ಲೂಕಿನ ಬಬಲೇಶ್ವರ ಹತ್ತಿರ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಕಾರು ಚಾಲಕ ಹೈದ್ರಾಬಾದ್ನ ರಮೇಶ ಶಾಂತಣ್ಣ ಯಾದವ್ (28), ಹೈದ್ರಾಬಾದ್ನ ನವಶ್ರೀ ಎನ್. ಪ್ರಸಾದ್ ನಾಯ್ಡು (15) ಮೃತಪಟ್ಟಿದ್ದು, ಆರ್. ಚಿನ್ನಬಾಬು ಮಲಗಜ್ಜಯ್ಯ (50), ಆರ್.ರೋಹಿಣಿ ಚಿನ್ನಬಾಬು ನಾಯ್ಡು (40) ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಪಣಜಿಯಿಂದ ಹೈದ್ರಾಬಾದ್ಗೆ ಹೊರಟಿತ್ತು. ಬಬಲೇಶ್ವರ ಹತ್ತಿರ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.