ADVERTISEMENT

ಕಾರ್ನಾಡ್ ಜತೆ ಒಡನಾಟವಿರಲಿಲ್ಲ : ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 12:52 IST
Last Updated 10 ಜೂನ್ 2019, 12:52 IST
   

ವಿಜಯಪುರ: ‘ಗಿರೀಶ್ ಕಾರ್ನಾಡ್‌ರ ಜತೆ ನನ್ನ ಒಡನಾಟವಿರಲಿಲ್ಲ. ಅವರಿಗಿಂತಲೂ ನಾನು ಬಹಳ ಸಣ್ಣವನು. ಅವರು ಬಹಳ ಹಿರಿಯರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಸಾಹಿತಿ ಅಲ್ಲ, ಕವಿಯೂ ಅಲ್ಲ. ಸಾಹಿತಿಗಳ ಜತೆ ನಮ್ಮದೇನಿದೆ?. ನಾನೊಬ್ಬ ರಾಜಕಾರಣಿ ಅಷ್ಟೆ’ ಎಂದರು.

‘ಕಾರ್ನಾಡ್‌ರಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರೆ. ಅವರಂತೆಯೇ ಬಹಳಷ್ಟು ಜನರಿಗೆ ಕೊಟ್ಟಿದ್ದಾರೆ. ದೇಶದ ಬಗ್ಗೆ ಹೆಚ್ಚು ಚಿಂತನೆ ಮಾಡುವವರಿಗೆ ಜ್ಞಾನಪೀಠ ಸಿಗಬೇಕಾಗಿತ್ತು. ಅಂತಹವರು ರಾಜ್ಯದಲ್ಲಿ ಬಹಳ ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.