ADVERTISEMENT

ವಿಜಯಪುರ: ನಾಡ ಪಿಸ್ತೂಲ್‌ ವಶಕ್ಕೆ, ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 16:37 IST
Last Updated 7 ಡಿಸೆಂಬರ್ 2020, 16:37 IST

ವಿಜಯಪುರ: ಆಲಮೇಲ ಪಟ್ಟಣದ ಐಬಿ ಸಮೀಪ ಮೂರು ನಾಡ ಪಿಸ್ತೂಲ್‌ ಹಾಗೂ 10 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಸುತ್ತಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಆಲಮೇಲದ ಬಂದೇನವಾಜ್‌ ಸೌದಾಗರ(40), ಸಲೀಂ ತಾಂಬೋಳಿ(28), ಮಡಿವಾಳಪ್ಪ ಡೆಂಗಿ(23), ಅಶೋಕ ಪೂಜಾರಿ(38) ಹಾಗೂ ಮಲ್ಲಿಕಾರ್ಜುನ ದೇವರಮನಿ(40) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಪಿಸ್ತೂಲ್‌ ಮಾರಾಟ ಬಂಧನ: ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯ ಹಂಚಿನಾಳ ತಾಂಡಾ ನಂ.1ರ ನಿವಾಸಿ ಕುಮಾರ ಜಾಧವ ಎಂಬಾತ ತನ್ನ ಮನೆಯಲ್ಲಿ ಅನಧಿಕೃತವಾಗಿ ನಾಡ ಪಿಸ್ತೂಲ್ ಮತ್ತು ಮೂರು ಜೀವಂತ ಗುಂಡುಗಳನ್ನು‌ ಇಟ್ಟುಕೊಂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿ, ಆತನನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.