
ಚಡಚಣ: ಚಿರತೆ ಕಾಟದಿಂದ ತಾಲ್ಲೂಕಿನ ತದ್ದೇವಾಡಿ, ಮರಗೂರ, ಮಣಕಂಲಗಿ, ಉಮರಾಣಿ, ಟಾಕಳಿ ಗ್ರಾಮದ ಜನರಲ್ಲಿ ಸೋಮವಾರ ದಿನವಿಡೀ ಆತಂಕದ ವಾತವಾರಣ ಸೃಷ್ಟಿಯಾಗಿತ್ತು.
ಈಚೆಗೆ ಚಿರತೆಯೊಂದು ಮಣಕಂಲಗಿ ಗ್ರಾಮದ ಜಮೀನಿನಲ್ಲಿ ಮಹಿಳೆಯೊಬ್ಬರಿಗೆ ಕಣ್ಣಿಗೆ ಬಿದ್ದ ಪರಿಣಾಮ ಭಾನುವಾರ ಮತ್ತು ಸೋಮವಾರ ಎರಡು ದಿನದಿಂದ ಅರಣ್ಯ ಇಲಾಖೆಯಿಂದ ಸತತ ಕಾರ್ಯಚರಣೆ ನಡೆಸಿದೆ.
ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಒಂದಾದ ಮೇಲೊಂದರಂತೆ ದನ- ಕರುಗಳು, ಆಡು, ಕುರಿಗಳನ್ನು ಚಿರತೆ ಕೊಂದು ಹಾಕುತ್ತಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಚಿರತೆ ಹಿಡಿಯಲು ಅರಣ್ಯ ಇಲಾಖೆ, ಹಲಸಂಗಿ ಗೊಲ್ಲ ಸಮುದಾಯ ತಂಡ, ಪೋಲಿಸ್ ಇಲಾಖೆ ಮತ್ತು ಗ್ರಾಮಸ್ಥರ ಸತತ ಪ್ರಯತ್ನ ನಡೆದರೂ ಸೋಮವಾರ ತಡ ರಾತ್ರಿಯ ವರೆಗೂ ಅದರ ಸುಳಿವು ದೊರಕಿಲ್ಲ.
ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳಾದ ಭಾಗ್ಯವಂತ ಮಸೂಧಿ, ಎಸ್. ಜಿ. ಸಂಗಾಲಕ, ಮಂಜುನಾಥ ಧುಳೆ, ಕಂದಾಯ ನಿರೀಕ್ಷಕ ಗುರುಶಾಂತ ಬಿರಾದಾರ, ಲೋಣಿ ಗ್ರಾಪಂ ಪಿಡಿಓ ಸತೀಶ ಬಿರಾದಾರ, ಗ್ರಾಮ ಆಡಳಿತ ಅಧಿಕಾರಿ ಸಿ ಎಸ್ ದಟ್ಟಿ, ಹಲಸಂಗಿ ಗೋಪಾಲಕ ತಂಡ, ಪಶು ಇಲಾಖೆ ಹಾಗೂ ತದ್ದೇವಾಡಿ, ಮರಗೂರ, ಮಣಕಂಲಗಿ, ಉಮರಾಣಿ, ಟಾಕಳಿ ಗ್ರಾಮಸ್ಥರು ಇದ್ದರು.
ಚಿರತೆ ಪತ್ತೆಗೆ ಇಲಾಖೆ ಸಾಕಷ್ಷು ಪ್ರಯತ್ನ ನಡೆದಿದೆ. ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆದಿದ್ದು, ಆದಷ್ಷು ಬೇಗನೆ ಪತ್ತೆ ಹಚ್ಚಲಾಗುವುದು.ಅಡವಿ ವಸ್ತಿ ಜನ ಮುಂಜಾಗ್ರತೆ ವಹಿಸಬೇಕುಮಲ್ಲಿನಾಥ ಕುಸನಾಳ, ಅರಣ್ಯಾಧಿಕಾರಿ ವಿಜಯಪುರ
ಚಿರತೆ ಸತತವಾಗಿ ಒಂದು ವರ್ಷದಿಂದ ಈ ಭಾಗದ ಜನರ ನಿದ್ದೆಗೆಡಿಸಿದೆ. ಸಾಕು ಪ್ರಾಣಿ, ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು, ರೈತರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಭದ್ರತೆ ವಹಿಸಲು ಕ್ರಮಕೈಗೊಳ್ಳಬೇಕುನಾಗನಾಥಗೌಡ ಬಿರದಾರ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.