ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ವಿಜಯಪುರ ಪಿಎಸ್ಐ ರೇಣುಕಾ ಜಕನೂರು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಕೊರೊನಾ ವಾರಿಯರ್ಸ್‌ ಪಿಎಸ್ಐ ರೇಣುಕಾ ಜಕನೂರು
ಕೊರೊನಾ ವಾರಿಯರ್ಸ್‌ ಪಿಎಸ್ಐ ರೇಣುಕಾ ಜಕನೂರು   

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿವಿಜಯಪುರ ಜಿಲ್ಲೆ ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ(ಎನ್‌ಟಿಪಿಸಿ) ದುಡಿಯುತ್ತಿರುವ ಹೊರರಾಜ್ಯದ ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಕಳುಹಿಸುವಂತೆ ಪ್ರತಿಭಟನೆಗಿಳಿದರು. ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲಾಯಿತು.

ಉದ್ಯೋಗ ಆರಿಸಿ ಹೊರರಾಜ್ಯಗಳಿಗೆ ಗುಳೆ ಹೋಗಿದ್ದ ಠಾಣಾ ವ್ಯಾಪ್ತಿಯ ಹಳ್ಳಿಗಳ ಹಾಗೂ ತಾಂಡಾಗಳ ಸಾವಿರಾರು ಜನರನ್ನು ಲಾಕ್‌ಡೌನ್‌ ಅವಧಿಯಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಅವಧಿಯನ್ನು ಮುಗಿಸಿ ಗ್ರಾಮಗಳಿಗೆ ಕಳುಹಿಸುವ ಕೆಲಸ ಮಾಡಿದೆ.

ಲಾಕ್‌ಡೌನ್‌ ವೇಳೆ ಐದು ತಿಂಗಳು ಕುಟುಂಬದಿಂದ ದೂರವಿದ್ದೆ. ಸಮರ್ಥವಾಗಿ ಕರ್ತವ್ಯ ನಿಭಾಯಿಸಲು ಪತಿ, ಸಹಕಾರಿ ಇಲಾಖೆಯ ನಿರೀಕ್ಷಕ ಗೋವಿಂದಗೌಡ ಪಾಟೀಲ್ ಬೆಂಬಲವಾಗಿದ್ದಾರೆ.

ADVERTISEMENT
ರೇಣುಕಾ ಜಕನೂರು,ಪಿಎಸ್ಐ

ಜಮಖಂಡಿ ತಾಲ್ಲೂಕಿನ ಕುಂಚನೂರು ಗ್ರಾಮದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು, ಕಬಡ್ಡಿಪಟುವೂ ಹೌದು. ಕರ್ನಾಟಕ ವಿವಿಗೆ ನಾಲ್ಕು ಬಾರಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿಗೆ ಒಂದು ಬಾರಿ ಯೂನಿರ್ವಸಿಟಿ ಬ್ಲೂ ಆಗಿದ್ದೆ.

–ರೇಣುಕಾ ಜಕನೂರು,ಪಿಎಸ್ಐ,ಎನ್‌ಟಿಪಿಸಿ ಪೊಲೀಸ್‌ ಠಾಣೆ,ಕೂಡಗಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.