ADVERTISEMENT

ವಿಜಯಪುರ | ತಿರಂಗ ಯಾತ್ರೆ; ವಿದ್ಯಾರ್ಥಿಗಳ ಜಯಘೋಷ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:56 IST
Last Updated 14 ಆಗಸ್ಟ್ 2024, 15:56 IST
ವಿಜಯಪುರ ನಗರದಲ್ಲಿ ಬುಧವಾರ ತಿರಂಗಯಾತ್ರೆ ಜರುಗಿತು
ವಿಜಯಪುರ ನಗರದಲ್ಲಿ ಬುಧವಾರ ತಿರಂಗಯಾತ್ರೆ ಜರುಗಿತು   

ವಿಜಯಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ತಿರಂಗ ಯಾತ್ರೆ ಜರುಗಿತು.

ಶಿವಾಜಿ ವೃತ್ತದಿಂದ ಆರಂಭಗೊಂಡ ತಿರಂಗಯಾತ್ರೆ ಮಹಾತ್ಮಗಾಂಧಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಸಿದ್ಧೇಶ್ವರ ದೇವಸ್ಥಾನದವರೆಗೆ ಸಾಗಿತು. ನೂರಾರು ವಿದ್ಯಾರ್ಥಿಗಳು ತಿರಂಗ ಹಿಡಿದು ಜಯಘೋಷ ಹಾಕಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ, ‘ವಿದ್ಯಾರ್ಥಿಗಳಲ್ಲಿ ರಾಷ್ಟೀಯ ವಿಚಾರಧಾರೆ ತುಂಬುವ ಕಾರ್ಯ ಎಬಿವಿಪಿ ಮಾಡಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.‌

ADVERTISEMENT

ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಜಿಲ್ಲಾ ಪ್ರಮುಖ ಎಂ.ಎಸ್. ಬಿರಾದಾರ, ನಗರ ಅಧ್ಯಕ್ಷ ಸುಮಾ ಬೋಳರಡ್ಡಿ, ಸಂಜೀವ ಕುಲಕರ್ಣಿ, ಮಲ್ಲಿಕಾರ್ಜುನ ಮಾಳಿ, ಮಂಜುನಾಥ ಹಳ್ಳಿ, ಸಂದೀಪ ಅರಳಗುಂಡಿ, ಶಿವನಗೌಡ ಬಿರಾದಾರ, ಸುರೇಖಾ ಕುಲಕರ್ಣಿ, ರೇಖಾ ಮಾಳಿ, ಸುಜ್ಞೆತ ಕುಲಕರ್ಣಿ, ಪ್ರವೀಣ ಬಿರಾದಾರ, ಐಶ್ವರ್ಯ ಅಸಂಗಿ, ಶ್ರೀಕಾಂತ, ಅಭಿಷೇಕ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.