ADVERTISEMENT

ಕಕ್ಕೇರಾ: ಜೆಸಿಬಿ ಮೂಲಕ ಕಾಲುವೆ ರಸ್ತೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:57 IST
Last Updated 30 ಅಕ್ಟೋಬರ್ 2025, 5:57 IST
ಕಕ್ಕೇರಾ ಪಟ್ಟಣದ ಸಮೀಪದ ಪಿರಗಾರದೊಡ್ಡಿಯ ರೈತರು ಸ್ವಂತ ಹಣದಿಂದ ಜೆಸಿಬಿ ಮೂಲಕ ಕಾಲುವೆ ರಸ್ತೆ ದುರಸ್ಥಿಗೊಳಿಸುತ್ತಿರುವುದು
ಕಕ್ಕೇರಾ ಪಟ್ಟಣದ ಸಮೀಪದ ಪಿರಗಾರದೊಡ್ಡಿಯ ರೈತರು ಸ್ವಂತ ಹಣದಿಂದ ಜೆಸಿಬಿ ಮೂಲಕ ಕಾಲುವೆ ರಸ್ತೆ ದುರಸ್ಥಿಗೊಳಿಸುತ್ತಿರುವುದು   

ಕಕ್ಕೇರಾ: ಕಳೆದ 45 ವರ್ಷಗಳಿಂದ ಸರ್ಕಾರ ಕಾಲುವೆ ರಸ್ತೆ ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ ನಾವೆಲ್ಲರೂ ಸ್ವಂತ ಹಣ ಹಾಕಿ ಕಾಲುವೆ ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ ಎಂದು  ರೈತ ಮುಖಂಡ ಮಾಳಪ್ಪ ಮಲಮುತ್ತೇರ ತಿಳಿಸಿದರು.

ಸಮೀಪದ ಪಿರಗಾರದೊಡ್ಡಿಯಿಂದ ಬನದೊಡ್ಡಿ ರಸ್ತೆಯವರೆಗೆ ಅಂದಾಜು 50 ಟಾಕ್ಟರ್ ಮರಮ್ ಹಾಕಿಸಿದ್ದೇವೆ. ಮಳೆಯಿಂದ ಕಾರ್ಯ ಮುಂದೂಡಲಾಗಿತ್ತು. ಮತ್ತೆ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲಿಯೇ ಸಂಪೂರ್ಣ ಕಾಲುವೆ ರಸ್ತೆ ದುರಸ್ತಿಗೊಳಿಸುತ್ತೇವೆ ಎಂದರು.

ಶೀಘ್ರವೇ ಬೆಳೆ ಕೊಯ್ಲಿಗೆ ಬರುವ ಹಂತದಲ್ಲಿದ್ದು, ರಾಶಿ ಮಾಡಿ ಭತ್ತ ತೆಗೆದುಕೊಂಡು ಹೋಗಲು ರಸ್ತೆಯಿಲ್ಲ. ಹೀಗಾಗಿ ನಾವೆಲ್ಲರೂ ದುರಸ್ತಿಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.