ADVERTISEMENT

ಸುರಪುರ: ಸಮುದಾಯ ಭವನ ನಿರ್ಮಾಣಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 13:52 IST
Last Updated 14 ಜುಲೈ 2021, 13:52 IST
ಸುರಪುರ ತಾಲ್ಲೂಕಿನ ತಿಂಥಣಿಯಲ್ಲಿ ಮಾದಿಗ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿಕೊಡುವಂತೆ ಬುಧವಾರ ಮಾದಿಗ ಸಮಾಜದ ಮುಖಂಡರು ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದರು
ಸುರಪುರ ತಾಲ್ಲೂಕಿನ ತಿಂಥಣಿಯಲ್ಲಿ ಮಾದಿಗ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿಕೊಡುವಂತೆ ಬುಧವಾರ ಮಾದಿಗ ಸಮಾಜದ ಮುಖಂಡರು ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದರು   

ಸುರಪುರ: ತಿಂಥಣಿ – ದಾದಲಾಪುರ ಗ್ರಾಮದ ನಡುವೆ ಮಾದಿಗ ಸಮಾಜಕ್ಕಾಗಿಯೇ ಸಮುದಾಯ ಭವನ ನಿರ್ಮಿಸಿಕೊಡಬೇಕು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಬುಧವಾರ ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದರು.

ತಿಂಥಣಿ ಗ್ರಾಮ ಘಟಕದ ಅಧ್ಯಕ್ಷ ಮೌನೇಶ ಹಳ್ಳೆಪ್ಪ ಮಾತನಾಡಿ, 'ಎರಡು ಅವಳಿ ಗ್ರಾಮಗಳಲ್ಲಿ ಮಾದಿಗ ಸಮಾಜದ ಬಹಳಷ್ಟು ಕುಟುಂಬಗಳು ವಾಸಿಸುತ್ತಿವೆ. ಸಮುದಾಯದ ಜನರ ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಇತರ ಸಮಾರಂಭಗಳನ್ನು ಮಾಡಲು ಸಮುದಾಯ ಭವನವಿಲ್ಲ. ಜನರ ಅನುಕೂಲಕ್ಕಾಗಿ ಸಮುದಾಯ ಭವನ ಕಟ್ಟಿಸಿಕೊಡಬೇಕು' ಎಂದು ಮನವಿ ಮಾಡಿದರು.

ಸಮಿತಿಯ ಪದಾಧಿಕಾರಿಗಳಾದ ನಿಂಗಪ್ಪ ಯಮನೂರ, ಯಮನಪ್ಪ ಹುಲಗಪ್ಪ, ಪರಶುರಾಮ, ಶಿವು ಪ್ರಕಾಶ, ಮಲ್ಲೇಶ, ಬಾಲರಾಜ, ಮೌನೇಶ ರಾಮಪ್ಪ, ಆನಂದ, ಗ್ರಾಮಸ್ಥರಾದ ಏಸುಮಿತ್ರ, ಮಲ್ಲಪ್ಪ, ಚಂದಪ್ಪ, ರತ್ನಪ್ಪ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.