ADVERTISEMENT

ದೇಶದ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ಇದೆ: ಡಿವೈಎಸ್‌ಪಿ ಯು. ಶರಣಪ್ಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 11:09 IST
Last Updated 24 ಡಿಸೆಂಬರ್ 2019, 11:09 IST
ಯಾದಗಿರಿಯ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಕಲಾವಿದ ಹಣಮಂತ ಡಿ.ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾಕೃತಿ ಪ್ರದರ್ಶನದಲ್ಲಿ ಡಿವೈಎಸ್ಪಿ ಯು.ಶರಣಪ್ಪ ಮಾತನಾಡಿದರು
ಯಾದಗಿರಿಯ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಕಲಾವಿದ ಹಣಮಂತ ಡಿ.ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾಕೃತಿ ಪ್ರದರ್ಶನದಲ್ಲಿ ಡಿವೈಎಸ್ಪಿ ಯು.ಶರಣಪ್ಪ ಮಾತನಾಡಿದರು   

ಯಾದಗಿರಿ: ‘ಪುರಾತನ ಕಾಲದಿಂದಲೂ ಶಿಲ್ಪಕಲೆಗಳಿಗೆ ಹೆಚ್ಚಿನ ಆದ್ಯತೆ ಇದೆ. ಜಗತ್ತಿನಲ್ಲೇ ದೇಶದ ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ’ ಎಂದು ಡಿವೈಎಸ್‌ಪಿ ಯು. ಶರಣಪ್ಪ ಹೇಳಿದರು.

ನಗರದ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾವಿದ ಹಣಮಂತ ಡಿ.ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾಕೃತಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಲ್ಪಕಲೆ ಕಠಿಣ ಕಲೆಯಾಗಿದೆ. ಮೊದಲು ಶ್ರಮವಹಿಸಿ ಶಿಲ್ಪ ತಯಾರಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಯಂತ್ರಗಳಿಂದ ತಯಾರಿಸಲಾಗುತ್ತಿದೆ. ಎಷ್ಟೇ ಯಂತ್ರಗಳು ಬಂದರೂ ಕಲೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದರು.

ADVERTISEMENT

ಹಿರಿಯ ಚಿತ್ರಕಲಾವಿದ ಸಂಗಣ್ಣ ಹೋತಪೇಟೆ, ಪ್ರಾಂಶುಪಾಲ ಭೀಮರಾಯ ಮಾನೇಗಾರ ಇದ್ದರು. ಪ್ರಶಾಂತಕುಮಾರ ಗುಮಳಾಪುರಮಠ ಸ್ವಾಗತಿಸಿ, ನಿರೂಪಿಸಿದರು. ಶಿವಕುಮಾರ ಎಂ.ಪಾಲ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.