ADVERTISEMENT

ವೈದ್ಯರ ಸಲಹೆ ತಪ್ಪದೆ ಪಾಲಿಸಿ: ಡಾ. ವಿನಯಕುಮಾರ

​ಪ್ರಜಾವಾಣಿ ವಾರ್ತೆ
Published 3 ಮೇ 2021, 3:24 IST
Last Updated 3 ಮೇ 2021, 3:24 IST
ಡಾ. ವಿನಯಕುಮಾರ
ಡಾ. ವಿನಯಕುಮಾರ   

ಕೋವಿಡ್‌ ದೃಢಪಟ್ಟ ನಂತರ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದೆ. ವೈದ್ಯರು ಹೇಳಿದ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಿದೆ. 8ನೇ ದಿನಕ್ಕೆ ನೆಗೆಟಿವ್ ವರದಿ ಬಂತು. ಆ ನಂತರ ಕೆಲ ದಿನ ವಿಶ್ರಾಂತಿ ಪಡೆದು ಈಗ ಕರ್ತವ್ಯಕ್ಕೆ ಹಾಜರಾಗಿದ್ದೇನೆ.

ಕ್ವಾರಂಟೈನ್‌ ವೇಳೆ 5 ದಿನ ಮಾತ್ರೆ ಕೊಟ್ಟರು. ಅಷ್ಟು ದಿನ ಮಾತ್ರೆ ಸೇವಿಸಿದೆ. ಜೊತೆಗೆ ಸಿ ವಿಟಿಮಿನ್‌ ಹೆಚ್ಚಾಗಿರುವ ಹಣ್ಣುಗಳ ಸೇವನೆ ಮಾಡಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ ಹಣ್ಣಿನ ಜ್ಯೂಸ್‌ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದಿದ್ದೇನೆ. ಈ ಮೂಲಕ ಕೋವಿಡ್‌ನಿಂದ ಗುಣಮುಖನಾಗಿದ್ದೇನೆ.

ಯಾವುದೇ ಆತಂಕವಿಲ್ಲದೆ, ಕೋವಿಡ್‌ ಭಯವಿಲ್ಲದಿದ್ದರೆ ಒಂದೇ ವಾರ ಅಥವಾ ಹತ್ತೇ ದಿನದಲ್ಲೇ ಗುಣಮುಖರಾಗಲು ಸಾಧ್ಯವಿದೆ. ಕೆಲವರು ವಿನಾ ಕಾರಣ ಭಯ, ಆತಂಕ ಪಡುತ್ತಾರೆ. ಇದರಿಂದ ನಷ್ಟವೇ ಹೊರತು ಲಾಭವಿಲ್ಲ. ಹೀಗಾಗಿ ಕೋವಿಡ್‌ ಬಂದರೂ ಎದೆಗುಂದದೆ ಔಷಧಿ ತೆಗೆದುಕೊಳ್ಳಬೇಕು. ಆಗ ರೋಗವೂ ಶೀಘ್ರ ಗುಣಮುಖವಾಗಲು ಸಾಧ್ಯವಿದೆ.

ADVERTISEMENT

ಕೆಲವರು ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೀಗಾಗಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರಲಿ. ಅಂತರ ಕಾಪಾಡಿಕೊಳ್ಳುವುದು ಕೂಡ ಅನಿವಾರ್ಯ. ಈ ಮೂಲಕ ಕೊರೊನಾ ಸರಪಳಿ ತುಂಡರಿಸಲು ಸಾಧ್ಯ.

-ಡಾ.ವಿನಯಕುಮಾರ, ಜಿಲ್ಲಾ ಮೈಕ್ರೊಬಯಾಲಜಿಸ್ಟ್, ಜಿಲ್ಲಾ ಸಾರ್ವಜನಿಕ ಪ್ರಯೋಗಾಲಯ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.