ADVERTISEMENT

ವಡಗೇರಾ: ಕ್ವಾರಿಯಲ್ಲಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 16:38 IST
Last Updated 30 ಅಕ್ಟೋಬರ್ 2020, 16:38 IST
ವಡಗೇರಾ ತಾಲ್ಲೂಕಿನ ಹುಲ್ಕಲ್(ಜೆ) ಗ್ರಾಮದ ಮಲ್ಲಪ್ಪ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದರು
ವಡಗೇರಾ ತಾಲ್ಲೂಕಿನ ಹುಲ್ಕಲ್(ಜೆ) ಗ್ರಾಮದ ಮಲ್ಲಪ್ಪ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದರು   

ವಡಗೇರಾ:ಮಣ್ಣಿನ ಕ್ವಾರಿಯಲ್ಲಿನ ನೀರಿನಲ್ಲಿ ಎತ್ತು ಮೈತೊಳೆಯಲು ಹೋಗಿ ಯುವಕ ಮೃತಪಟ್ಟ ಘಟನೆ ತಾಲ್ಲೂಕಿನ ಹುಲ್ಕಲ್ ಜೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಶಂಬುಲಿಂಗಪ್ಪ ನಾಟೇಕಾರ್ ಅವರ ಪುತ್ರ ಮಲ್ಲಪ್ಪ (22) ಮೃತರು.

ಬೆಳಿಗ್ಗೆ 10ಗಂಟೆ ಸುಮಾರಿಗೆ ಎತ್ತುಗಳ ಮೈತೊಳೆಯಲು ಹೋದಾಗ ಎತ್ತು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಎತ್ತನ್ನು ರಕ್ಷಿಸಲು ಮುಂದಾದಾಗ ಈಜು ಬಾರದೆ ಮಲ್ಲಪ್ಪ
ಮೃತಪಟ್ಟಿದ್ದಾರೆ.

ADVERTISEMENT

ಅಗ್ನಿಶಾಮಕ ಸಿಬ್ಬಂದಿ ಮತ್ತು ಈಜು ಪರಿಣತರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.