ಯಾದಗಿರಿ: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಮಳೆ ಸುರಿಯಿತು.
ಯಾದಗಿರಿ ನಗರ, ಗುರುಮಠಕಲ್, ಕೆಂಭಾವಿ, ಯರಗೋಳ ಸೇರಿದಂತೆ ವಿವಿಧೆಡೆ 5ರಿಂದ 10 ನಿಮಿಷಗಳ ಕಾಲ ಜೋರು ಮಳೆಯಾಯಿತು. ಇನ್ನೂ ಕೆಲ ಕಡೆ ಮೋಡ ಕವಿದ ವಾತಾವರಣದಿಂದ ತಂಪಾಗಿದೆ.
ಪರದಾಡಿದ ಬೆಳೆಗಾರರು: ಅಕಾಲಿಕ ಮಳೆಯಿಂದ ನಗರದ ಎಪಿಎಂಸಿಗೆ ಮಾರಾಟಕ್ಕೆ ತಂದಿದ್ದ ತೊಗರಿ, ಶೇಂಗಾ ಬೆಳೆಗಾರರು ಪರದಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.