ADVERTISEMENT

ಹುಚ್ಚು ನಾಯಿ ಕಡಿತ: 9 ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 10:51 IST
Last Updated 2 ಜನವರಿ 2020, 10:51 IST
ಶಹಾಪುರ ನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹುಚ್ಚುನಾಯಿ ಕಡಿತದಿಂದ ಗಾಯಗೊಂಡ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು
ಶಹಾಪುರ ನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹುಚ್ಚುನಾಯಿ ಕಡಿತದಿಂದ ಗಾಯಗೊಂಡ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು   

ಶಹಾಪುರ: ಪಟ್ಟಣದ ದಿಗ್ಗಿಬೆಸ್ ಪ್ರದೇಶದ ಬಡಾವಣೆಯಲ್ಲಿ ಬುಧವಾರ ಹುಚ್ಚು ನಾಯಿಯೊಂದು 9 ಮಕ್ಕಳಿಗೆ ಕಡಿದಿದೆ.

ಸಣ್ಣಪುಟ್ಟ ಗಾಯಗೊಂಡ ಮಕ್ಕಳು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಯಿಯು ದಿಗ್ಗಿಬೆಸ್‌ನಿಂದ ಮೊಚಿಗಡ್ಡೆ, ಗಂಗಾನಗರ, ಗಾಂಧಿ ಚೌಕ್ ಬಡಾವಣೆಯ ಕಡೆ ಓಡುತ್ತಾ ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸಿದೆ. ಅದರಲ್ಲಿ ಲೊಕೇಶ (7) ಮತ್ತು ಅಮಿತ (8) ಅವರಿಗೆ ಹೆಚ್ಚು ಗಾಯ ಆಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 9 ಮಕ್ಕಳು ಪಡೆದುಕೊಂಡಿದ್ದಾರೆ ಎಂದು ವೈದ್ಯ ಡಾ.ಚಂದ್ರು ಚವಾಣ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.