ADVERTISEMENT

ಗುರುಮಠಕಲ್: ರಾಜ್ಯೋತ್ಸವ ಕಾರ್ಯಕ್ರಮ

ಜನರನ್ನು ನಕ್ಕನಗಿಸಿದ ಜ್ಯೂನಿಯರ್ ಸಾದುಕೋಕಿಲಾ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 4:52 IST
Last Updated 10 ನವೆಂಬರ್ 2022, 4:52 IST
ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕರುನಾಡು ಸೇನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು
ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕರುನಾಡು ಸೇನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು   

ಗುರುಮಠಕಲ್: ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಈಚೆಗೆ ಕರುನಾಡು ಸೇನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ಜಾಗೃತಿ ಕಾರ್ಯಕ್ರಮ ಜರುಗಿತು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರತ್ನ ದಿ.ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಗೌರವ ಸಲ್ಲಿಸಿದರು.

ವಿದ್ಯಾರ್ಥಿನಿ ಶ್ರೀಜಾ ಮಾಡಿದ ಕನ್ನಡ ನಾಡು-ನುಡಿ ಕುರಿತು ಮಾತನಾಡಿದರು. ಖುಷಿರೆಡ್ಡಿ , ದೀಪ, ಪುಷ್ಪ ಕೆ. ಕಣೆಕಲ್, ಬಸವಪ್ರಿಯ ಗೋಗಿ ,ವಿಶ್ವ, ಮೇಘನರೆಡ್ಡಿ, ದೀಕ್ಷಾ ಗುಮಡಾಲ್ ಕನ್ನಡ ನಾಡ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.

ADVERTISEMENT

ಜೂನಿಯರ್ ಸಾದು ಕೋಕಿಲ ಹಾಸ್ಯ ಮತ್ತು ಲಕ್ಷ್ಮಿ ಬಿಜಾಪುರ ಗಾನ ಮಂಜರಿ ನಡೆಸಿಕೊಟ್ಟರು.

ಲಲಿತಾ ಕೆ.ಕಣೆಕಲ್, ಬಾಲ ಕಾರ್ಮಿಕ ಇಲಾಖೆಯ ರಿಯಾಜ್ ಪಟೇಲ ವರ್ಕನಳ್ಳಿ, ಕರುನಾಡು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿನಾಥ ಕಣೆಕಲ್, ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ ಟಿ.ರಾಠೋಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ ಗೌಸ್, ಸಂಚಾಲಕ ಶಿವಶಂಕರ, ಬಸವರಾಜ ವಿಭೂತಿ, ಆಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.