ಹುಣಸಗಿ: ‘ಪ್ರತಿಯೊಬ್ಬ ಕನ್ನಡಿಗನೂ ತಾಯಿಯಂತೆ ಕನ್ನಡವನ್ನು ಪ್ರೀತಿಸಬೇಕು, ಗೌರವಿಸಬೇಕು’ ಎಂದು ಶಾಸಕ ರಾಜೂಗೌಡ ಹೇಳಿದರು.
ಪಟ್ಟಣದ ಎಸ್.ಕೆ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ
ರಾಜೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತಿ ಹಾಗೂ ಕಸಾಪ ರಾಜ್ಯ ಮಾರ್ಗದರ್ಶಿ ಮಂಡಳಿ ಸಲಹೆಗಾರ ಶ್ರೀನಿವಾಸ ಜಾಲವಾದಿ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಮೇಲಿನಮನಿ,ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿದರು.
ವಿರೇಶ ಚಿಂಚೋಳಿ, ಬಸವರಾಜ ಸ್ವಾಮಿ ಸ್ಥಾವರಮಠ, ಬಸವರಾಜ ಮಲಗಲದಿನ್ನಿ,ಶರಣು ದಂಡಿನ, ಸಿಪಿಐ ಎಂ.ಬಿ ಚಿಕ್ಕಣನವರ್, ನಾಗಪ್ಪ ಹಡಿಕ್ಯಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಚನ್ನಯ್ಯಸ್ವಾಮಿ ಹಿರೇಮಠ, ಕೋರಿಸಂಗಯ್ಯ ಗಡ್ಡದ, ಬಸಣ್ಣ ಗೋಡ್ರಿ, ಸಣ್ಣಕೆಪ್ಪ ಕೊಂಡಿಕಾರ, ಬಸನಗೌಡ ವಠಾರ, ಗುರುನಾಥ ಹುಲಕಲ್, ಹೊನ್ನಕೇಶವ ದೇಸಾಯಿ, ಮಲ್ಲಣ್ಣ ಡಂಗಿ, ಮಶಾಕ ಯಾಳಗಿ, ಮಹಾದೇವಿ ಬೇವಿನಾಳಮಠ, ನಿಂಗಪ್ಪ ಚವ್ವಾಣ, ಚಳಿಗೆಪ್ಪ ಬೇವಿನಾಳ, ಕಾಂತೇಶ ಹಲಗಿನಮನಿ, ಮಲ್ಲಿಕಾರ್ಜುನ ಗುತ್ತೇದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.