ADVERTISEMENT

ಸಿಡಿಲು ಬಡಿದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:33 IST
Last Updated 12 ಮೇ 2021, 5:33 IST
ನಿಂಗಣ್ಣ ಬೂದಗುಂಪಿ
ನಿಂಗಣ್ಣ ಬೂದಗುಂಪಿ   

ಕಕ್ಕೇರಾ: ಇಲ್ಲಿನ ಪುರಸಭೆ ವ್ಯಾಪ್ತಿಯ ಬೂದಗುಂಪಿ ದೊಡ್ಡಿಯಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಅವಘಡ ನಡೆದಿದೆ.

ನಿಂಗಣ್ಣ ಬಿ. ಬೂದಗುಂಪಿ (13) ಮೃತಪಟ್ಟ ಬಾಲಕ. ಅವನ ಸಹೋದರ ಹಣಮಂತನಿಗೆ (13) ಸಣ್ಣಪುಟ್ಟ ಗಾಯಗಳಾಗಿವೆ. ಮಳೆ ಸುರಿಯತೊಡಗಿದಾಗ ತಮ್ಮ ಭತ್ತಕ್ಕೆ ಮಳೆಯಿಂದ ರಕ್ಷಿಸಲು ತಾಡಪಲ್ ಹೊದಿಕೆ ಹಾಕುತ್ತಿದ್ದಾಗ ಸಿಡಿಲು ಬಡಿದು ,ಸ್ಥಳದಲ್ಲೇ ನಿಂಗಣ್ಣ ಮೃತಪಟ್ಟಿದ್ದಾನೆ. ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT