ADVERTISEMENT

ಯರಗೋಳದಲ್ಲಿ ಸಿಡಿಲು ಬಡಿದು ಎತ್ತು ಸಾವು

​ಪ್ರಜಾವಾಣಿ ವಾರ್ತೆ
Published 17 ಮೇ 2022, 11:33 IST
Last Updated 17 ಮೇ 2022, 11:33 IST
ಹೊನಗೇರಾ ಗ್ರಾಮದ ರೈತ ದಂಡಪ್ಪ ಹನುಮಂತ ಅವರ ಎತ್ತು ಮೃತಪಟ್ಟಿರುವುದು
ಹೊನಗೇರಾ ಗ್ರಾಮದ ರೈತ ದಂಡಪ್ಪ ಹನುಮಂತ ಅವರ ಎತ್ತು ಮೃತಪಟ್ಟಿರುವುದು   

ಯರಗೋಳ (ಯಾದಗಿರಿ ಜಿಲ್ಲೆ): ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿತಕ್ಕೆ ಇಲ್ಲಿಗೆ ಸಮೀಪದ ಹೊನಗೇರಾ ಗ್ರಾಮದ ರೈತ ದಂಡಪ್ಪ ಹನುಮಂತ ಅವರ ಎತ್ತು ಮೃತಪಟ್ಟಿದೆ.

ಬೆಳಿಗ್ಗೆ ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿತ್ತು. ಮಧ್ಯಾಹ್ನ ಮೋಡ ಆವರಿಸಿಕೊಂಡು ಜೋರು ಮಳೆ ಸುರಿಯಿತು. ತಗ್ಗು, ರಸ್ತೆ, ಚರಂಡಿಗಳಲ್ಲಿ ನೀರು ಹರಿದಾಡಿತು.

ಅಲ್ಲಿಪುರ, ಮಲಪ್ಪನಹಳ್ಳಿ, ವಡ್ಡನಹಳ್ಳಿ, ಕ್ಯಾಸಪ್ಪನಹಳ್ಳಿ, ಕಾನ್ನಳ್ಳಿ, ಬಸವಂತಪುರ, ಹೆಡಗಿಮದ್ರಾ, ಮುದ್ನಾಳ, ಠಾಣಗುಂದಿ, ಕಂಚಗಾರಹಳ್ಳಿ, ಚಾಮನಹಳ್ಳಿ, ಹೋರುಂಚಾ, ಅರಿಕೇರಾ (ಬಿ), ಬೊಮ್ಮಚಟ್ಟನಹಳ್ಳಿ, ಯಡ್ಡಳ್ಳಿ, ಬಂದಳ್ಳಿ, ಬಾಚವಾರ, ಹತ್ತಿಕುಣಿ, ಚಾಮನಾಳ, ಬೆಳಗೇರಾ, ಮೊಟನಹಳ್ಳಿ ಗ್ರಾಮಗಳಲ್ಲಿ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.