ADVERTISEMENT

ಮೊಹರಂ ಕುಣಿತ ವೇಳೆ ವ್ಯಕ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 7:44 IST
Last Updated 1 ಸೆಪ್ಟೆಂಬರ್ 2020, 7:44 IST

ಯಾದಗಿರಿ: ಮೊಹರಂ ಕಡೆ ದಿನದ ಅಂಗವಾಗಿಅಲಾಯಿ ಕುಣಿಯಲು ತಮಟೆ ತರಲು ಪಕ್ಕದ ಮನೆಗೆ ಹೋದಾಗ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಹೊಸಹಳ್ಳಿ (ಎಸ್) ತಾಂಡಾದಲ್ಲಿ ನಡೆದಿದೆ.ಹೊಸಹಳ್ಳಿ ತಾಂಡಾದ ಬಾಲಪ್ಪ (45) ಕೊಲೆಯಾದ ವ್ಯಕ್ತಿ.

ಭಾನುವಾರ ಮೊಹರಂನ ಕೊನೆ ಇತ್ತು. ಈ ವೇಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಣಿತಕ್ಕೆತಮಟೆ ತರಲು ಪಕ್ಕದ ಮನೆಗೆ ಹೋದಾಗ ಐವರುಬಡಿಗೆಯಿಂದ ಹೊಡೆದು ಬಾಲಪ್ಪನ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತುಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಐವರ ವಿರುದ್ಧಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.