ಸೈದಾಪುರ: ಸಮೀಪದ ಮಾಧ್ವಾರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಮಾವ ಹಾಗೂ ಅಳಿಯ ಸಾವನ್ನಪ್ಪಿದ್ದಾರೆ. ಅಶೋಕ (33), ಚಂದ್ರಶೇಖರ (28) ಮೃತಪಟ್ಟವರು.
ಮಂಗಳವಾರ ಸಂಜೆ ಗುಡುಗು, ಸಿಡಿಲಿನ ಸಹಿತ ಮಳೆ ಸುರಿಯಿತು. ಈ ವೇಳೆ ಬೇವಿನ ಮರದ ಕೆಳಗೆ ನಿಂತಿದ್ದ ಅಶೋಕ ಮತ್ತು ಚಂದ್ರಶೇಖರ ಸಾವನ್ನಪ್ಪಿದ್ದಾರೆ. ಮರದಿಂದ ಸ್ವಲ್ಪ ದೂರದಲ್ಲಿ ಶರಣಪ್ಪ ಹಾಗೂ ಸಾಬಣ್ಣ ಇದ್ದರು. ಇವರಲ್ಲಿ ಸಾಬಣ್ಣ ಅವರ ಸ್ಥಿತಿ ಗಂಭೀರವಾಗಿದೆ. ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಸೈದಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.