ADVERTISEMENT

‘ಮಕ್ಕಳ ಪಾಲಿನ ಆರಾಧ್ಯ ದೈವ ಶಿವಕುಮಾರ ಸ್ವಾಮೀಜಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:09 IST
Last Updated 2 ಏಪ್ರಿಲ್ 2022, 2:09 IST
ಕಕ್ಕೇರಾ ಪಟ್ಟಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಜನ್ಮದಿನ ಆಚರಿಸಲಾಯಿತು
ಕಕ್ಕೇರಾ ಪಟ್ಟಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಜನ್ಮದಿನ ಆಚರಿಸಲಾಯಿತು   

ಕಕ್ಕೇರಾ: ‘ಡಾ.ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹ ಮಾಡಿ, ಸಾವಿರಾರು ಮಕ್ಕಳ ಪಾಲಿಗೆ ಆರಾಧ್ಯ ದೈವವಾಗಿದ್ದರು’ ಎಂದು ಹಿರಿಯಜೀವಿ ಚನ್ನಪ್ಪ ಹಿರೇಹಳ್ಳ ಮಾಸ್ತರ ಹೇಳಿದರು.

ಪಟ್ಟಣದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಡಾ.ಶಿವಕುಮಾರ ಸ್ವಾಮಿಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ರಾಜ್ಯದ ಪ್ರತಿ ಜಿಲ್ಲೆ ಹಾಗೂ ಹಳ್ಳಿಗಳಿಂದ ಹಲವಾರು ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ, ಪ್ರಸಾದವನ್ನು ನೀಡಿದ ಮಹಾ ಶಿವಶರಣ, ಕಾಯಕಜೀವಿ ಅವರು’ ಎಂದು ಹೇಳಿದರು.

ಡಾ.ಗುಡ್ನಾಳ, ನಂದಣ್ಣ ಅಸ್ಕಿ, ಶೇಖ ಸಿಸ್ಟರ್ ತಿಂಥಣಿ, ಮಹೇಶಕುಮಾರ ವಠಾರ, ಮಹಿಬೂಬ ನಾಶಿ, ಮಹಾಂತೇಶ, ಗಂಗಾಧರ ಪತ್ತಾರ ಸೌಮ್ಯ, ಸ್ವಾತಿ, ವಿರೇಶ ಸೇರಿದಂತೆ ಅನೇಕರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.