ADVERTISEMENT

ಯಾದಗಿರಿಯಲ್ಲಿ ಗುಡುಗು ಸಹಿತ ಜೋರು ಮಳೆ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 21:15 IST
Last Updated 5 ಏಪ್ರಿಲ್ 2021, 21:15 IST
ಯಾದಗಿರಿಯ ಸುಭಾಷ ವೃತ್ತದ ಬಳಿ ಸೋಮವಾರ ಮಳೆಯಿಂದ ಗೋಡೆ ಕುಸಿದು ಬೈಕ್‌ಗಳು ಜಖಂಗೊಂಡಿರುವುದು
ಯಾದಗಿರಿಯ ಸುಭಾಷ ವೃತ್ತದ ಬಳಿ ಸೋಮವಾರ ಮಳೆಯಿಂದ ಗೋಡೆ ಕುಸಿದು ಬೈಕ್‌ಗಳು ಜಖಂಗೊಂಡಿರುವುದು   

ಯಾದಗಿರಿ: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಯಿತು. ಯರಗೋಳ ಸಮೀಪದ ಅಲ್ಲಿಪುರ ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಸಾವನ್ನಪ್ಪಿದೆ. ಭತ್ತದ ತೆನೆಗಳು ನೆಲ ಕಚ್ಚಿವೆ.

ನಗರದ ಸುಭಾಷ ವೃತ್ತದ ಉಳ್ಳೆಸೂಗುರ ಕಾಂಪ್ಲೆಕ್ಸ್‌ ಬಳಿ ನಿರ್ಮಾಣ ಹಂತದ ಗೋಡೆ ಕುಸಿದ ಪರಿಣಾಮ 8 ಬೈಕ್‌ಗಳು ಜಖಂಗೊಂಡಿವೆ. ಬೀದಿ ಬದಿ ಹೂ–ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರಿಗೆ ತೊಂದರೆಯಾಯಿತು.

ಖಾನಾಪುರ–ಯಾದಗಿರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿಬಿದ್ದಿದ್ದರಿಂದಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT

ನಗರದ ಎಪಿಎಂಸಿಆವರಣದಲ್ಲಿ ಮಾರಾಟಕ್ಕೆ ತರಲಾಗಿದ್ದ ಶೇಂಗಾ, ಮಳೆಯಿಂದ ನೀರು ಪಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.